i
ಕಾಂಗ್ರೆಸ್ ಸ್ಥಳೀಯ ಅಭ್ಯರ್ಥಿ ಡಾ.ಬಿ.ತಿಪ್ಪೇಸ್ವಾಮಿಗೆ ಟಿಕೆಟ್ ನೀಡಲಿ, ಕಾರ್ಯಕರ್ತರ ಒತ್ತಾಯ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಚಾರ ಕೈಗೊಂಡಿರುವ ಡಾ. ಬಿ ತಿಪ್ಪೇಸ್ವಾಮಿ ಹಿರಿಯೂರು ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸಂಘಟನೆ ಮುಖಂಡರುಗಳು ಸಭೆ ನಡೆಸಿ ಬೆಂಬಲಿಸುವಂತೆ ಮನವಿ ಮಾಡಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಾದ ಡಾ.ಬಿ ತಿಪ್ಪೇಸ್ವಾಮಿ ಸ್ಥಳೀಯರಾಗಿದ್ದು ಈ ಬಾರಿ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಹೈಕಮಾಂಡ್ ಗೆ ಮನವಿ ಮಾಡಿದರು.
ಕೆಲವು ಮುಖಂಡರು ಮಾತನಾಡಿ ಡಾ.ಬಿ ತಿಪ್ಪೇಸ್ವಾಮಿ ಅವರಿಗೆ ಎಲ್ಲಾ ಜಾತಿ ಜನಾಂಗದವರ ಬೆಂಬಲವಿದ್ದು ಸ್ಥಳೀಯ ಅಭ್ಯರ್ಥಿಯಾದ ಇವರಿಗೆ ಟಿಕೆಟ್ ನೀಡುವಂತೆ ಹಲವು ಸಂಘಟನೆಗಳು ಒತ್ತಾಯಿಸುತ್ತಿವೆ. ಅದರಂತೆ ನಾವುಗಳು ಸಹ ಒತ್ತಾಯ ಮಾಡುತ್ತಿದ್ದು ಜಿಲ್ಲೆಯ ಸ್ಥಳೀಯ ಅಸ್ಮಿತೆ ಉಳಿಯಬೇಕಾದರೆ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದರು.
ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಓ ಶಂಕರ್ ಮಾತನಾಡಿ, ಚಿತ್ರದುರ್ಗದ ಲೋಕಸಭಾ ಕ್ಷೇತ್ರದ ಟಿಕೆಟ್ ಸ್ಥಳೀಯರಾದ ಡಾ. ಬಿ ತಿಪ್ಪೇಸ್ವಾಮಿ ಅವರಿಗೆ ಸಿಗುವ ವಿಶ್ವಾಸವಿದೆ. ಎಲ್ಲ ಜಾತಿ ಜನಾಂಗದವರ ವಿಶ್ವಾಸ ಗಳಿಸಿರುವ ತಿಪ್ಪೇಸ್ವಾಮಿಯವರಿಗೆ ಕೆಪಿಸಿಸಿ ಮತ್ತು ಎಐಸಿಸಿ ಗಳಿಗೆ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಶಾಸಕರುಗಳು ಡಾ.ಬಿ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ಶಿಫಾರಸ್ಸು ಮಾಡಲು ಮನವಿ ಮಾಡಿಕೊಂಡರು.
ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಡಾ.ಬಿ ತಿಪ್ಪೇಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷವು ನೀಡಿರುವ ಗ್ಯಾರಂಟಿ ಯೋಜನೆಗಳಿಂದಾಗಿ ರಾಹುಲ್ ಗಾಂಧಿ ಅವರ ಕೈ ಬಲ ಪಡಿಸಲು ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಅಲ್ಲದೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಕೈ ಬಲ ಪಡಿಸಲು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಷ್ಟು ಸಂಘಟಿಸಲು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಯ ಮುಖಂಡರು ಮತ್ತು ಕಾರ್ಯಕರ್ತರದಾಗಿದೆ. ಈ ಬಾರಿ ಕೆಪಿಸಿಸಿ ಮತ್ತು ಎಐಸಿಸಿ ಹಾಗೂ ಹೈಕಮಾಂಡ್ ನನಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಎಲ್ಲಾ ಜಾತಿ ಜನಾಂಗದವರ ವಿಶ್ವಾಸವನ್ನು ತೆಗೆದುಕೊಂಡು ಚುನಾವಣೆಗೆ ಮುನ್ನಡೆಯುವುದಾಗಿ ಡಾ.ತಿಪ್ಪೇಸ್ವಾಮಿ ಭರವಸೆ ನೀಡಿದರು. ಈಗಾಗಲೇ ಕೆಲ ತಿಂಗಳಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ತಯಾರಿ ಆರಂಭಿಸಿ ಪಕ್ಷ ಸಂಘಟನೆ ಮಾಡುವ ಮೂಲಕ ಪ್ರಚಾರ ಆರಂಭಿಸಿದ್ದೇವೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದು ಎಲ್ಲ ಜಾತಿ ಜನಾಂಗದವರು ನಮ್ಮನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದಾರೆ. ಈ ಬಾರಿ ನೀವೇ ಗೆಲ್ಲುತ್ತಿರ ಎಂದು ಹೇಳುತ್ತಿದ್ದಾರೆ ಆದಕಾರಣ ಪಕ್ಷದ ಕಾರ್ಯಕರ್ತರು ಸಮಾಜದ ಮುಖಂಡರುಗಳು ಕಾಂಗ್ರೆಸ್ ಪಕ್ಷದ ಎಲ್ಲರೂ ನನಗೆ ಆಶೀರ್ವಾದ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಭೆಯಲ್ಲಿ ಮೇಟಿಕುರ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್ ಹನುಮಂತಪ್ಪ, ಅಡಿವಪ್ಪ, ಮಲ್ಲಪ್ಪ ಭರಂಪುರ, ರಾಜ್ಯ ಪ್ರದಾನ ಕಾರ್ಯದರ್ಶಿ ಮಾದಿಗ ಯುವ ಸೇನೆ, ಹೆಚ್.ಜಗನ್ನಾಥ್, ಕೆ.ಮಂಜುನಾಥ್ ಸೂರಗೊಂಡನಹಳ್ಳಿ, ಮೆಟಿಕುರ್ಕೆ ರಂಗಸ್ವಾಮಿ, ಒಪಿಟಿ ಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಗಾಂಧಿನಗರ, ಬೆಳ್ಳಿ, ಆಲೂರು ಶ್ರೀನಿವಾಸ್, ಶಿವು ಹಿರಿಯೂರು ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಅಧ್ಯಕ್ಷರು ಮಾಜಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.