i
ಕಾಂತರಾಜ್ ವರದಿ ಅವೈಜ್ಞಾನಿಕ, ಬಿಡುಗಡೆ ಬೇಡ, ಸಚಿವರು, ಸಂಸದರು ಶಾಸಕರ ಸಭೆ ಕರೆಯಲಿ- ನಂಜಾವಧೂತ ಸ್ವಾಮೀಜಿ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಕರ್ನಾಟಕ ಸರ್ಕಾರ ಹಿಂದುಳಿದ ಶಾಶ್ವತ ಆಯೋಗದ ಕಾಂತರಾಜ್ ವರದಿ ವಿಚಾರವಾಗಿ *ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ತುಮಕೂರಿನಲ್ಲಿ ಸಭೆ ನಡೆಸಲಾಯಿತು.
ಕಾಂತರಾಜು ಆಯೋಗದ ವರದಿಯು ಅವೈಜ್ಞಾನಿಕವಾಗಿ ಇರುವುದರಿಂದ ವರದಿಯನ್ನು ಬಿಡುಗಡೆ ಮಾಡದಂತೆ ಶ್ರೀಗಳ ನೇತೃತ್ವದಲ್ಲಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಎಲ್ಲ ಜಾತಿ, ಒಳ ಜಾತಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿಲ್ಲ, ಪೂರ್ವಾಗ್ರಹದಿಂದ ವರದಿ ಸಿದ್ಧ ಪಡಿಸಲಾಗಿದೆ. ಕೆಲ ಜಾತಿಗಳ ಅಂಕಿ ಅಂಶಗಳನ್ನು ಕಡಿಮೆ ಮಾಡಲಾಗಿದೆ. ಹಾಗಾಗಿ ಕಾಂತರಾಜ್ ವರದಿ ಅವೈಜ್ಞಾನಿಕವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ, ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಗಾ.ನಂ. ಶ್ರೀಕಂಠಯ್ಯ, ರಾಜ್ಯ ಕುಂಚಿಟಿಗರ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಶ್ರೀನಿವಾಸಯ್ಯ, ಒಕ್ಕಲಿಗ ಸಂಘದ ಖಜಾಂಚಿ ಮಾರೇಗೌಡ, ಹೋರಾಟ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿ, ವರದಿಯನ್ನು ಜಾರಿಗೊಳಿಸದಂತೆ, ಸಮಾಜದ ಸಚಿವರು, ಶಾಸಕರು, ಸಂಸದರು ನೊಳಗೊಂಡಂತೆ ತುರ್ತಾಗಿ ಸಭೆಯನ್ನು ಕರೆಯಬೇಕೆಂದು ಸಭೆಯು ತೀರ್ಮಾನಿಸಲಾಯಿತು ಎಂದು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಆಡಿಟರ್ ನಾಗರಾಜ್ ಯಲಚವಾಡಿ ತಿಳಿಸಿದ್ದಾರೆ.