i
ಭೀಕರ ಅಪಘಾತ, ಓರ್ವ ಬಾಲಕ ಸ್ಥಳದಲ್ಲೇ ಸಾವು, 5 ಮಂದಿಗೆ ಗಾಯ…
ಚಂದ್ರವಳ್ಳಿ ನ್ಯೂಸ್, ಧರ್ಮಪುರ:
ಎರಡು ಬೈಕ್ ಗಳ ಮುಖಾಮುಖಿ ಡಿಕ್ಕಿಯಿಂದಾದ ಭೀಕರ ಅಪಘಾತಕ್ಕೆ ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರೆ 5 ಮಂದಿ ಗಾಯಗೊಂಡು ಧರ್ಮಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗೂಳ್ಯ ಗ್ರಾಮದ ರಂಗಸ್ವಾಮಿ ಅವರ ಪುತ್ರ ಪ್ರಜ್ವಲ್(6) ಸ್ಥಳದಲ್ಲೇ ಸಾವು ಕಂಡ ಬಾಲಕ. ಇವರ ತಂದೆ ರಂಗಸ್ವಾಮಿ, ನಿಂಗಮ್ಮ, ತಿಪ್ಪಣ್ಣ, ತಿಮ್ಮೇಗೌಡ, ಅನುಷಾ ಗಾಯಗೊಂಡಿದ್ದು ಎಲ್ಲ ಗಾಯಾಳುಗಳು ಧರ್ಮಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೂಳ್ಯ-ಹರಿಯಬ್ಬೆ ಗ್ರಾಮದ ಅಧ್ಯದ ತೋಪಿನ ಗೊಲ್ಲಾಳಮ್ಮ ದೇವಸ್ಥಾನ ಸಮೀಪದ ಮೇಕೆ ತಿಮ್ಮಜ್ಜರ ಹಟ್ಟಿ ಸಮೀಪ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಬೈಕ್ ಗಳ ಅತಿವೇಗ ಅಜಾರೂಕತೆಯೇ ಕಾರಣ ಎನ್ನಲಾಗಿದೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.