i
ಭೀಕರ ಬರಗಾಲ ನಡುವೆ ಸಿಎಂ & ಸಚಿವರ ಬಿಂದಾಸ್ ದುನಿಯಾ..!, ಮಹಾದೇವಪ್ಪ ಕ್ಷಮೆಯಾಚಿಸಲಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟದ ಸಚಿವರುಗಳು ಬಿಂದಾಸ್ ದುನಿಯಾ..! ಮಾಡುತ್ತಿದ್ದಾರೆಂದು ಬಿಜೆಪಿ ನಾಯಕ ಬಸವನಗೌಡ ಯತ್ನಾಳ್ ಆರೋಪಿಸಿದ್ದಾರೆ.
ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ಸಿಎಂ ಮನೆ ನವೀಕರಣ – 3 ಕೋಟಿ ವೆಚ್ಚ. ಸಿಎಂ ಕಚೇರಿ ನವೀಕರಣ – 50 ಲಕ್ಷ ವೆಚ್ಚ. ಡಿಸಿಎಂ ಕಚೇರಿ ನವೀಕರಣ –50 ಲಕ್ಷ ವೆಚ್ಚ. ಡಿಸಿಎಂ ಮನೆ ನವೀಕರಣ – 50 ಲಕ್ಷ ವೆಚ್ಚ.ಡಾ. ಜಿ. ಪರಮೇಶ್ವರ್ ಕಚೇರಿ ನವೀಕರಣ – 15 ಲಕ್ಷ ವೆಚ್ಚ. ಡಾ. ಜಿ. ಪರಮೇಶ್ವರ್ ಮನೆ ನವೀಕರಣ – 35 ಲಕ್ಷ ವೆಚ್ಚ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಚೇರಿ ನವೀಕರಣ – 10 ಲಕ್ಷ ವೆಚ್ಚ. ಲಕ್ಷ್ಮೀ ಹೆಬ್ಬಾಳ್ಕರ್ ಮನೆ ನವೀಕರಣ – 25 ಲಕ್ಷ ವೆಚ್ಚ ಹೀಗೆ ಸಿಎಂ, ಡಿಸಿಎಂ, ಸಚಿವರುಗಳು ಬಿಂದಾಸ್ ದುನಿಯಾ ಮಾಡುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.
ಸಚಿವರು ಕೂಡಲೇ ಕ್ಷಮೆ ಕೋರಲಿ- ಮಾನ್ಯ ಮಹದೇವಪ್ಪನವರೇ! ವ್ಯಕ್ತಿ ಗೌರವಕ್ಕೆ ಧಕ್ಕೆ ತರುವ ನಿಮ್ಮ ಈ ಕಾರ್ಯವನ್ನು ನಾನಲ್ಲ ನಾಗರಿಕ ಸಮಾಜ ಎಂದಿಗೂ ಕ್ಷಮಿಸುವುದಿಲ್ಲ. ಎಲ್ಲರಿಗೂ ಸಂವಿಧಾನದ ಪಾಠ ಮಾಡುವ ತಾವು ಸಂವಿಧಾನದ ಪೀಠಿಕೆಯನ್ನು ದಿನವೂ ತಾವು ಒಮ್ಮೆ ಓದಬೇಕಾಗಿ ತಮ್ಮಲ್ಲಿ “ಕಳ-ಕಳಿಯ” ವಿನಂತಿ ಎಂದು ಬಸವನಗೌಡ ಯತ್ನಾಳ್ ಆಗ್ರಹ ಮಾಡಿದ್ದಾರೆ.ವಿಪಕ್ಷ ನಾಯಕನ ಸ್ಥಾನಕ್ಕೂ ಈ ನಿಮ್ಮ ಕಾರ್ಯಕ್ಕೂ ಯಾವುದೇ ಸಂಬಂಧವಿಲ್ಲ, ನಿಮ್ಮ ಈ ತಪ್ಪನ್ನು ತೇಪೆ ಹಚ್ಚಲು ಪ್ರಯತ್ನ ಪಡಬೇಡಿ. ಸಂವಿಧಾನದ ಆಶಯಗಳ ವಿರುದ್ದ ಈ ನಿಮ್ಮ ಕಾರ್ಯದ ಬಗ್ಗೆ ಕ್ಷಮೆ ಯಾಚಿಸಿ ಎಂದು ಯತ್ನಾಳ್ ತಾಕೀತು ಮಾಡಿದ್ದಾರೆ.