i
ಕಳಪೆ ಅಥವಾ ಗುಣಮಟ್ಟವಲ್ಲದ ಔಷಧಿಗಳ ಬಳಕೆ ಮಾಡಬೇಡಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಪಾರ್ಮೆಥಿನ್ ಲೋಷನ್ (ಫರ್ಮೆಜೆಸ್ಟ್-ಆಂಟಿಕ್ ಸ್ಕೇಬಿಸ್ ಲೋಷನ್), ಕ್ಲೋಸ್ಟ್-ಐಬಿ (ಕ್ಲೋಸೆಂಟಲ್ ಮತ್ತು ಐವಿರಮೆಕ್ಟಿನ್ ಓರಲ್ ಲಿಕ್ವಿಡ್ ವೆಟ್), ಮಿಸೆಂಟಲ್-ಹೆಬ್ (ಟಿಲ್ಮಿಸರ್ಟನ್ ಮತ್ತು ಐಡ್ರೋಕ್ಲೋರೈಡ್ಥೈಝಡ್ ಟ್ಯಾಬ್ಲೆಟ್ಸ್ ಐಪಿ), ಆಸ್ಪಿರಿನ್ ಗ್ಯಾಸ್ಟ್ರೋ-ರಿಜಿಸೈಂಟ್ ಟ್ಯಾಬ್ಲೆಟ್ಸ್ ಐಪಿ (150 ಎಂಜಿ), ಟೆಲ್ಮಿಸ್ಟ್ನ್ ಮತ್ತು ಐಡ್ರೋಕ್ಲೋರೊಥೈಝಡ್ ಟ್ಯಾಬ್ಲೆಟ್ಸ್ ಐಪಿ (ಟೆಲ್ಮ್ಸ್ಟ್ 40 ಹೆಚ್ ಟ್ಯಾಬ್ಲೆಟ್ಸ್), ಟ್ಯೂಮಿಮೆಂಟ್-ಜಿ2(ಮೆಟ್ಫಾರ್ಮಿನ್ ಐಡ್ರೋಕ್ಲೋರೈಡ್ ಮತ್ತು ಗ್ಲಿಮಿಪಿನೈಡ್ ಟ್ಯಾಬ್ಲೆಟ್ಸ್ ), ಗ್ಲಿಮಿಪಿನೈಡ್ ಟ್ಯಾಬ್ಲೆಟ್ಸ್ ಐಪಿ2 ಎಂಜಿ, ಸೋಡಿಯಂ ವಾಲ್ಟ್ರೋಟ್ ಟ್ಯಾಬ್ಲೆಟ್ಸ್ 500 ಎಂಜಿ (ವಾಲ್ಟೋವಿಲ್ 500), ಟಿಲ್ಮಿಸರ್ಟನ್ ಮತ್ತು ಐಡ್ರೋಕ್ಲೋರೈಡ್ಥೈಝಡ್ ಟ್ಯಾಬ್ಲೆಟ್ಸ್ ಐಪಿ (ಟೆಲ್ಟೂನ್-ಹೆಚ್) ಮತ್ತು ಅಕ್ಸಿಟೋಸಿನ್ ಇಂಜಕ್ಸನ್ ಐಪಿ (ಗೈನೋಟೊಸಿನ್ 5 ಐಯು) ಔಷಧಿಗಳನ್ನು/ಕಾಂತಿವರ್ಧಕಗಳನ್ನು ಗುಣಮಟ್ಟವಲ್ಲದ ಔಷಧಿಗಳೆಂದು ತಿಳಿಸಿದೆ. ಈ ಔಷಧಿಗಳನ್ನು/ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ ಅಥವಾ ಉಪಯೋಗಿಸುವುದಾಗಲಿ ಮಾಡಬಾರದು. ಯಾರಾದರೂ ಈ ಔಷಧಿಗಳನ್ನು/ಕಾಂತಿವರ್ಧಕಗಳನ್ನು ದಾಸ್ತಾನನ್ನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಔಷಧ ನಿಯಂತ್ರಕರ ಗಮನಕ್ಕೆ ತರುವುದು. ಸಾರ್ವಜನಿಕರು ಈ ಔಷಧಗಳನ್ನು/ ಕಾಂತಿವರ್ಧಕಗಳನ್ನು ಉಪಯೋಗಿಸಬಾರದೆಂದು ಕರ್ನಾಟಕ ರಾಜ್ಯದ ಔಷಧ ನಿಯಂತ್ರಕ ಭಾಗೋಜಿ ಟಿ ಖಾನಾಪೂರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನವೆಂಬರ್-9ರಂದು ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಬಿಡುಗಡೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: Release of educational fund for working children on November 9…
ಕಾರ್ಮಿಕ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನವೆಂಬರ್ 9 ರಂದು ಬೆಳಿಗ್ಗೆ 10.30 ಗಂಟೆಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಕ್ಕಳಿಗೆ 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಹಣಕಾಸು ಮತ್ತು ಕಾರ್ಪೋರೆಟ್ ವ್ಯಾಪಾರಗಳ ಸಚಿವೆ ನಿರ್ಮಲಾ ಸೀತಾರಾಮ್ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮತ್ತು ಕಾರ್ಮಿಕ ಸಚಿವ ಸಂತೋಪ್ ಲಾಡ್ ಸಮಾರಂಭದ ಘನ ಉಪಸ್ಥಿತಿ ವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿನಗರ ವಿಧಾನ ಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರ ವಹಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.