i
`ಕೋಟಿಗೊಬ್ಬ ಶರಣ’ ಕವನ ಸಂಕಲನ ಸಿದ್ದಗಂಗಾಶ್ರೀ ಕವನಗಳಿಗೆ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರತಿಷ್ಠಿತ ಸಮಾಜಸೇವಾ ಸಂಸ್ಥೆ ಕಾಯಕಯೋಗಿ ಫೌಂಡೇಶನ್ ಪ್ರತಿ ವರ್ಷದಂತೆ ಈ ಬಾರಿಯು ಕನ್ನಡರಾಜ್ಯೋತ್ಸವದ ಅಂಗವಾಗಿ ಅಪರೂಪದ ವಿಭಿನ್ನ ದಾಖಲೆಯ ಕೃತಿಯನ್ನು ಹೊರತರಲು ನಿರ್ಧರಿಸಿದ್ದು ಕರ್ನಾಟಕ ರತ್ನ, ಪದ್ಮಭೂಷಣ, ಲಿಂಗೈಕ್ಯ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 117ನೇ ಜನ್ಮದಿನೋತ್ಸವದ ಅಂಗವಾಗಿ ‘ಕೋಟಿಗೊಬ್ಬ ಶರಣ’ ಕವನ ಸಂಕಲನ ಬಿಡುಗಡೆಗೊಳಿಸಲಿದೆ.
ಪೂಜ್ಯರ ಜನ್ಮದಿನಾಚರಣೆಯಾದ ಏಪ್ರಿಲ್-1ರಂದು ಶ್ರೀಸಿದ್ದಗಂಗಾಮಠದಲ್ಲಿ ‘ಕೋಟಿಗೊಬ್ಬ ಶರಣ’ ಕವನ ಸಂಕಲನ ಪರಮಪೂಜ್ಯ ಶ್ರೀಸಿದ್ದಲಿಂಗ ಮಹಾಸ್ವಾಮೀಜಿಯವರಿಂದ ಲೋಕಾರ್ಪಣೆಗೊಳ್ಳಲಿದೆ.
ಆಸಕ್ತ ಕವಿಗಳು ಲಿಂಗೈಕ್ಯ ಮಹಾಶರಣ ತ್ರಿವಿಧ ದಾಸೋಹಿ ಪೂಜ್ಯ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿಯವರನ್ನು ಕುರಿತಾದ ಒಂದು ಸ್ವರಚಿತ ಕವನವನ್ನು (ಹದಿನೈದು ಸಾಲುಗಳು ಮೀರದಂತೆ) ನಿಶಾ ಮುಳಗುಂದ, ನಂ.೨೮೦, ೧೦ನೇಕ್ರಾಸ್, ೨ನೇ ಮೇನ್, ೨ನೇ ಸ್ಟೇಜ್, ಮಧುವನ ಎಕ್ಸಟೆನ್ಷನ್, ಶ್ರೀರಾಂಪುರ, ಮೈಸೂರು-೫೭೦೦೩೪ ಈ ವಿಳಾಸಕ್ಕೆ ಡಿಟಿಪಿ ಮಾಡಿಸಿ ಕವಿಗಳ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರದ ಸಹಿತ ಕಳುಹಿಸಿಕೊಡಬೇಕು. ಅಂಚೆಮೂಲಕ ಕಳುಹಿಸಿದ ಕವನ ಹಾಗೂ ಪೋಟೋ ವನ್ನು ಮೊ. 9740011624, ೭೦೨೨೮೦೫೧೯೦ ಸಂಖ್ಯೆಗೆ ಟೈಪ್ ಮಾಡಿ ಕಳುಹಿಸಬೇಕು.
ಶತಾಯುಷಿ ಪರಮಪೂಜ್ಯರು ೧೧೧ ವರ್ಷಗಳ ಸುದೀರ್ಘ ಕಾಲ ನಡೆಸಿದ ತ್ರಿವಿಧ ದಾಸೋಹ, ಕಾಯಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ಕವನರೂಪದಲ್ಲಿ ರಚಿಸಿ ಕಳುಹಿಸಬೇಕು. ೧೧೧ ಕವಿಗಳಿಂದ ಸಂಗ್ರಹವಾದ ‘ಕೋಟಿಗೊಬ್ಬ ಶರಣ’ ಕವನ ಸಂಕಲನ ಸಂಗ್ರಹಯೋಗ್ಯವಾಗಿದ್ದು ಕವಿತೆಗಳನ್ನು ಕಳುಹಿಸಿಕೊಡಲು ಡಿ.10 ಕೊನೆಯ ದಿನಾಂಕವಾಗಿರುತ್ತದೆ ಎಂದು ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.