i
ಸಚಿವ ಮುನಿಯಪ್ಪನವರು ರಾಜೀನಾಮೆ ಕೇಳುವುದು ಸರಿಯಲ್ಲ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಡಿಸೆಂಬರ್ ನಲ್ಲಿ ನಡೆಯಲಿರುವ ಬೆಳಗಾವಿ ಆಧಿವೇಶನದಲ್ಲಿ ಸದಾಶಿವ ಆಯೋಗ ವರದಿಯನ್ನು ಮಂಡಿಸಿ, ಚರ್ಚಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಕೋಡಿಹಳ್ಳಿಯ ಆದಿಜಾಂಬವ ಗುರುಪೀಠದ ಶ್ರೀ ಷಡಕ್ಷರಮುನಿ ದೇಶಿ ಕೇಂದ್ರ ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಚುನಾವಣೆಯ ಪ್ರನಾಳಿಕೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವುದಾಗಿ ತಿಳಿಸಿತ್ತು ಅದರಂತೆ ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರ ಈ ವರದಿಯನ್ನು ಮಂಡಿಸಿಲ್ಲ, ಇದರ ಬಗ್ಗೆ ಮುಖ್ಯಮಂತ್ರಿಗಳ ಗಮನವನ್ನು ಸೆಳೆಯುವುದರ ಮೂಲಕ ವರದಿ ಜಾರಿಗೆ ಒತ್ತಾಯ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಮುಂದಿನ ದಿನದಲ್ಲಿ ಬೆಳಗಾವಿಯಲ್ಲಿ ನಡೆಯುವ ವಿಧಾನಸಭೆಯ ಆಧಿವೇಶನದಲ್ಲಿ ಸದಾಶಿವ ಆಯೋಗದ ವರದಿಯನ್ನು ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿದರು.ಸದಾಶಿವ ಆಯೋಗದ ವರದಿಯನ್ನು ಅಧಿವೇಶನದಲ್ಲಿ ಮಂಡಿಸದಿದ್ದರೆ ಸಮಾಜದ ಚುನಾಯಿತ ಪ್ರತಿನಿಧಿಗಳೊಂದಿಗೆ ಸಭೆ ಕರೆದು ಚರ್ಚೆ ಮಾಡುವುದರ ಮೂಲಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದ ಶ್ರೀಗಳು ತಿಳಿಸಿದರು.
ಸದಾಶಿವ ವರದಿ ಜಾರಿಗಾಗಿ ಕಳೆದ 30 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಮಾದಿಗ ಜನಾಂಗ ಬಹಳ ಹಿಂದೆ ಉಳಿದಿದೆ, ಅರ್ಥಿಕ, ಶೈಕ್ಷಣಿಕ, ಸಾಮಾಜಕವಾಗಿ ಹಿಂದುಳಿದ್ದಾರೆ. ಸಮಾಜದ ಪ್ರಗತಿಗೆ ವರದಿ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಸದಾಶಿವ ಆಯೋಗದ ವರದಿ ಅನುಷ್ಠಾನ ಅಗತ್ಯವಾಗಿದೆ ಎಂದ ಶ್ರೀಗಳು, ಇದೇ ಸಂದರ್ಭದಲ್ಲಿ ಕಾಂತರಾಜ್ ಅವರ ವರದಿಯನ್ನು ಅನುಷ್ಠಾನ ಮಾಡಬೇಕಿದೆ. ಸದಾಶಿವ ಆಯೋಗ ವರದಿ ಜಾರಿಯಾದರೆ ಬೇರೆ ಸಹೋದರ ಜಾತಿಯವರು ಆತಂಕ ಪಡುವ ಅಗತ್ಯ ಇಲ್ಲ ಇದರ ಜಾರಿಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗುವ ವರದಿ ಇದಾಗಿದೆ ಎಂದು ಷಡಕ್ಷರ ಮುನಿ ಶ್ರೀಗಳು ತಿಳಿಸಿದರು. ಸಮಾಜದ ಮುಖಂಡ ತಿಪ್ಪೇಸ್ವಾಮಿ ಮಾತನಾಡಿ, ಸದಾಶಿವ ಆಯೋಗ ವರದಿ ಜಾರಿ ಮಾಡಲು ಸಚಿವ ಮುನಿಯಪ್ಪರವರು ರಾಜೀನಾಮೆ ನೀಡುವಂತೆ ಒಂದು ಸಮುದಾಯ ಒತ್ತಾಯ ಮಾಡಿರುವುದು ಸರಿಯಲ್ಲ ತಮ್ಮ ಜನಾಂಗದವರು ಮುಂದೆ ಬರುಲು ಸಹಾಯವಾಗುವುದಕ್ಕೆ ಈ ವರದಿ ಕಾರಣವಾಗಿದೆ ಈ ಹಿನ್ನಲೆಯಲ್ಲಿ ಜಾರಿಗೆ ಆಗ್ರಹಿಸಿದ್ದಾರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ನಮ್ಮ ಸಹೋದರ ಸಮುದಾಯದವರು ಜಾರಿಗೆ ಅಡ್ಡಿ ಮಾಡುತ್ತಿರುವುದು ಸರಿಯಲ್ಲ ಎಂದರು.ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಮೂರು ಪಕ್ಷಗಳು ಸಮ್ಮತಿಸಿದೆ, ಆದರೆ ನಮ್ಮ ಸಹೋದರ ಸಮುದಾಯವರು ಅಡ್ಡಿ ಮಾಡುತ್ತಿರುವುದು ಸರಿಯಲ್ಲ, ವರದಿ ಇನ್ನೂ ಬಹಿರಂಗಗೊಂಡಿಲ್ಲ ಪರಿಶಿಷ್ಟ ಜಾತಿಯಿಂದ ನಮ್ಮನ್ನು ಹೂರಗಿಡುತ್ತಾರೆ ಎಂಬ ಮಾಹಿತಿ ಬಂದಿದ್ದು ಎಲ್ಲಿಂದ ಎಂದು ಗೋತ್ತಾಗಿಲ್ಲ ಇದೆಲ್ಲ ಉಹಾ-ಪೋಹವಾಗಿದೆ ಇಲ್ಲಿ ಯಾರನ್ನು ಸಹಾ ಬಿಡುವ ಮಾತಿಲ್ಲ, ಪರಿಶಿಷ್ಟ ಜಾತಿಯ 101 ಜಾತಿಯವರನ್ನು ಸಹಾ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಕಾರ್ಯ ಇದಾಗಿದೆ ಎಂದು ತಿಳಿಸಿದರು.ಗೋಷ್ಟಿಯಲ್ಲಿ ರಾಜಣ್ಣ, ರವಿ, ಸಮರ್ಥ ಭಾಗವಹಿಸಿದ್ದರು.