i
ಶ್ರೀ ಮಾರಿಕಾಂಭ ದೇವಿ ಅಮ್ಮನವರ ನೂತನ ರಥ ಲೋಕರ್ಪಣೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕಿನ ಇಂಗಳದಾಳ್ ಗ್ರಾಮದಲ್ಲಿ ಶ್ರೀ ಮಾರಿಕಾಂಭ ದೇವಿ ಅಮ್ಮನವರ ನೂತನ ರಥ(ಉಚ್ಚಯ)ವನ್ನು ಇಂಗಳದಾಳ್ ಗ್ರಾಮಸ್ಥರು ಪೂಜಾ ಕಾರ್ಯಕ್ರಮದಲ್ಲಿ ವಿಧಿ ವಿಧಾನಗಳ ಮೂಲಕ ಶುದ್ದಿ ಮಾಡಿ ರಥ(ಉಚ್ಚಾಯ) ವನ್ನು ಭಕ್ತರು ಮತ್ತು ಗ್ರಾಮಸ್ಥರು ಬೃಹತ್ ಆಕಾರದ ಹೂವಿನ ಹಾರಗಳನ್ನು ರಥಕ್ಕೆ ಹಾಕುವ ಮೂಲಕ ಲೋಕರ್ಪಣೆ ಮಾಡಲಾಯಿತು. ಈ ರಥವನ್ನು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಸುಮಾರು ಐದಾರು ತಿಂಗಳಿಂದ ಶಿಲ್ಪಿ ತಿಪ್ಪೇಸ್ವಾಮಿ ಎಂಬುವವರು ರಥವನ್ನು ಕೆತ್ತಿದ್ದಾರೆ. ರಥದಲ್ಲಿ ಮಾರಮ್ಮ ಕೂರಲು ಸ್ಥಳ ವ್ಯವಸ್ಥೆ, ರಥದ ಸುತ್ತಲೂ ಚಿತ್ರಕಲೆ ಬಿಡಿಸಲಾಗಿದೆ.ಹಲವು ವರ್ಷಗಳ ಕನಸನ್ನು ಊರಿನ ಹಿರಿಯರು ನಿರಂತರ ಶ್ರಮದಿಂದ ಈಗ ನನಸಾಗಿದೆ ಎಂದರೆ ತಪ್ಪಾಗಲಾರದು. ಮಧ್ಯಾಹ್ನ ಸಾವಿರಾರು ಭಕ್ತ ಎಳೆಯುವ ಮೂಲಕ ಪೂಜೆ ಸಲ್ಲಿಸಿದರು. ನಂತರ ಗಣಪತಿ ಪೂಜೆ, ಗಂಗಾಪೂಜೆ, ಪುಣ್ಯಹಾ ಶುದ್ದಿ, ಪಂಚಗವ್ಯ ಶುದ್ದಿ, ಕೂಷ್ಮಂಡ ಬಲಿ, ಅನ್ನ ಬಲಿ, ಮಹಾಮಂಗಳಾರತಿ ಮಾಡಿದರು. ಜಿಲ್ಲೆಯ ನಾನಾ ಭಾಗಗಳಿಂದ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಬೆಳೆ ಪಾಯಿಸಾ, ಪಲ್ಯ ಅನ್ನ ಸಂಬಾರ್ ವ್ಯವಸ್ಥೆ ಮಾಡಿ ದಾಸೋಹವನ್ನು ನೇರವೇರಿಸಿದರು. ಭಕ್ತರು ಹಣ್ಣು ಕಾಯಿ, ಹೂವಿನ ಹಾರ ಅರ್ಪಿಸುವ ಮೂಲಕಭಕ್ತಿ ಸಮರ್ಪಣೆ ಮಾಡಿ ದೇವರ ಕೃಪೆಗೆ ಪಾತ್ರರಾದರು.ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರಾದ ಜಿ.ತಿಪ್ಪೇಸ್ವಾಮಿ, ಓ. ರವಿ ಕೀರ್ತಿ, ಗೌಡ್ರು ಓಬಣ್ಣ, ಬಿ.ಎಂ. ಗಿರಿಯಪ್ಪ, ಪಿ.ಓ.ತಿಮ್ಮಣ್ಣ, ಪಿ.ಕೆ.ರಾಮಣ್ಣ, ಕೆ.ಟಿ.ಗಾದ್ರಪ್ಪ, ಜಿ.ಟಿ.ಮಹಂತೇಶ್, ಬಿ.ಅಶೋಕ್, ಹನುಮಣ್ಣ, ಎಸ್.ರಮೇಶ್, ತಳವಾರ್ ಮಹಂತೇಶ್, ಸಣ್ಣಪ್ಪ, ಬೆಂಗಳೂರು ನಾಗರಾಜ್, ಜಿ.ಟಿ.ಗುರುರಾಜ್, ಶೇಖರಣ್ಣ, ಹೆಚ್. ಉಮೇಶ್, ಹೆಚ್.ನಾಗರಾಜ್ ಇದ್ದರು.