![](https://www.chandravallinews.com/wp-content/uploads/2023/11/0-6.jpg)
i
ನ.16ರಂದು ವಿದ್ಯುತ್ ವ್ಯತ್ಯಯ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಪಿ.ಕೆ ಹಳ್ಳಿ ಮತ್ತು ವಿದ್ಯಾನಗರ 11 ಕೆ.ವಿ ಮಾರ್ಗದ ತುರ್ತು ಕಾಮಗಾರಿ ಕೆಲಸ ನಿರ್ವಹಿಸಲು ನವೆಂಬರ್ 16ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ನಿಲುಗಡೆಗೊಳಪಡುವ ಪ್ರದೇಶಗಳು: ವಿದ್ಯಾನಗರ ಫೀಡರ್ನ ಪಿಎಂಎಸ್ ಬಡಾವಣೆ, ಮರುಳು ಸಿದ್ದೇಶ್ವರ ಬಡಾವಣೆ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಪಿ.ಕೆ.ಹಳ್ಳಿ ಫೀಡರ್ನ ವಿದ್ಯಾನಗರ, ಏಳುಕೋಟಿ ಬಡಾವಣೆ, ಶಿವಚಾರ್ಯ ಬಡಾವಣೆ ಮೆದೇಹಳ್ಳಿ, ಮೆದೇಹಳ್ಳಿ ಗ್ರಾಮ, ತಮಟಕಲ್ಲು, ಮಲ್ಲನಕಟ್ಟೆ, ನಿರ್ಮಿತಿ ಕೇಂದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಚಿತ್ರದುರ್ಗ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.