i
ಸಹಕಾರ ಸಂಸ್ಥೆಗಳಲ್ಲಿ ಸರಳೀಕರಣ, ರಫ್ತು ವೃದ್ಧಿಗಾಗಿ ಜೆಮ್-ಪೋರ್ಟಲ್ ಬಳಕೆ…
ಚಂದ್ರವಳ್ಳಿ ನ್ಯೂಸ್, ತುಮಕೂರು:
೬೯ ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಇಲಾಖೆ, ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಚಿತ್ರದುರ್ಗ ತಾಲ್ಲೂಕಿನಲ್ಲಿ ಬರುವ ಎಲ್ಲಾ ಸಹಕಾರ ಸಂಘಗಳ ಮತ್ತು ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ೬೯ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದ ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ಸರಳೀಕರಣ, ರಫ್ತು ವೃದ್ಧಿಗಾಗಿ ಜೆಮ್-ಪೋರ್ಟಲ್ ಬಳಕೆ ದಿನಾಚರಣೆ ಇದರ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.ಸಹಕಾರ ರತ್ನ ಪುರಸ್ಕೃತ ಜಿಂಕಲು ಬಸವರಾಜ್ ಪ್ರಾಸ್ತಾವಿಕ ಭಾಷಣದಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮದ ಆಚರಣೆ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ನಿರ್ದೇಶಕ ಆರ್.ರಾಮರೆಡ್ಡಿ, ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ಚಿತ್ರದುರ್ಗ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್ ಮಾತನಾಡಿ ನಾವು ಇಂದು ನಮ್ಮದೇ ಆದ ಸಂಘವನ್ನು ಯಾವ ರೀತಿ ನಡೆಸಿಕೊಳ್ಳಬೇಕು ಅದರ ಅನುಕೂಲ ಅನಾನುಕೂಲ ಹಾಗೂ ಆ ಸಂಘದ ವಿಫಲತೆಯಾಗಲು ಏನು ಕೊರತೆಯಾಗಿದೆ ಎಂಬ ತಮ್ಮ ತಮ್ಮ ಸಂಘದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಸಂಘವೆಂದರೆ ಒಂದು ಸಂಘವಲ್ಲ ಅದು ಒಂದು ವ್ಯವಸ್ಥೆ ರೀತಿಯಲ್ಲಿ ನಡೆಸಬೇಕು. ಸಭೆಗಳ ನಡೆಸುವ ಬಗ್ಗೆಯಾಗಲಿ, ಲೆಕ್ಕಪರಿಶೋಧನೆ ಮಾಡಿಸುವುದಾಗಲಿ ಸಂಘದ ಉದ್ದೇಶಗಳೇನು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರವು ಶೂನ್ಯ ಬಡ್ಡಿದರಲ್ಲಿ ಸಾಲ ನೀಡುತ್ತಿದೆ. ಹಾಗೂ ೩ % ಬಡ್ಡಿ ದರಲ್ಲಿ ಭೂ ಅಭಿವೃದ್ಧಿ ಸಾಲ ನೀಡುತ್ತಿದ್ದು, ಕರ್ನಾಟಕ ಸರ್ಕಾರವು ಯಶಸ್ವಿನಿ ಆರೋಗ್ಯ ವಿಮೆ ಯೋಜನ್ನು ಪುನಃ ಪ್ರಾರಂಭ ಮಾಡಿದ್ದು, ನವೆಂಬರ್-೦೧ ರಿಂದ ಸಹಕಾರ ಸಂಘ ಸಂಸ್ಥೆಗಳಲ್ಲಿ ನೋಂದಣಿ ಪ್ರಾರಂಭಿಸಲಾಗಿದ್ದು, ಇದರ ಪ್ರಯೋಜನವನ್ನು ಸಹಕಾರಿ ಸದಸ್ಯರುಗಳು ಪಡೆದುಕೊಳ್ಳಬೇಕಾಗಿ ತಿಳಿಸಿದರು.ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ನಿರ್ದೇಶಕ ಎಸ್.ಆರ್.ಗಿರೀಶ್ ಮಾತನಾಡಿ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಪ್ರತಿ ವರ್ಷದಂತೆ ೭ ದಿನಗಳು ಹಬ್ಬದ ರೀತಿಯಲ್ಲಿ ಬಹಳ ಅರ್ಥಪೂರ್ಣವಾಗಿ ನವೆಂಬರ್ ೧೪ ರಿಂದ ೨೦ ರವರೆಗೆ ಆಚರಿಸಲಾಗುವುದು ಇಂದಿನ ದಿನಾಚರಣೆಯ ವಿಷಯ ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ಸರಳೀಕರಣ, ರಫ್ತು ವೃದ್ಧಿಗಾಗಿ ಜೆಮ್-ಪೋರ್ಟಲ್ ಬಳಕೆ ದಿನಾಚರಣೆಯನ್ನು ಆಚರಿಸುತ್ತಿದ್ದು, ಇಂದಿನ ದಿನ ನಮ್ಮ ಮನೆಗಳಲ್ಲಿಯೇ ಆನ್ ಲೈನ್ ಜೊಮ್ಯಾಟೋ, ಅಮೇಜಾನ್, ನಂತಹ ಸರ್ವಿಸ್ಗಳಲ್ಲಿ ಊಟ ಸಹ ತರುವಂತಹ ವ್ಯವಸ್ಥೆ ಇದೆ, ಸಹಕಾರ ಇಲಾಖೆಗಳಲ್ಲಿ ನಮ್ಮ ಸಂಘ ಸಂಸ್ಥೆಗಳಲ್ಲಿ ರೂಢಿಸಿಕೊಳ್ಳುವುದು ಹಾಗೂ ಸಿಬ್ಬಂದಿಗಳಿಗೆ ನೀಡುವ ಸಂಬಳ, ಭತ್ಯೆ ಇರಬಹುದು, ಸಂಘಗಳ ಸದಸ್ಯರುಗಳಿಗೆ ಷೇರು ಡಿವಿಡೆಂಡ್ ನೀಡುವ ಬಗ್ಗೆ ಸಹಕಾರ ಆಕ್ಟ್ ಗಳಲ್ಲಿ ತಿದ್ದುಪಡಿ, ಬದಲಾವಣೆಗಳನ್ನು ಮಾಡಬೇಕು ಎಂದು ತಿಳಿಸಿದರು.ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಮೂರ್ತಿ ಮಾತನಾಡಿ ಸಹಕಾರ ಕ್ಷೇತ್ರ ಬಹು ದೊಡ್ಡ ಕ್ಷೇತ್ರವಾಗಿದ್ದು, ದೇಶದ ಜನಸಂಖ್ಯೆಯಲ್ಲಿ ಶೇ.೩೦ ಜನರು ಸಹಕಾರಿ ಕ್ಷೇತ್ರದಲ್ಲಿದ್ದಾರೆ. ಸದೃಡವಾಗಿ ಸಹಕಾರ ಚಳುವಳಿ ಮುಖಾಂತರ ಸಮಾಜದಲ್ಲಿ ಒಂದು ಅರಿವು ಮೂಡಿಸುವ ಕೆಲಸ ನಮ್ಮ ಸಹಕಾರ ಕ್ಷೇತ್ರ ಮಾಡುತ್ತಿದೆ ಎಂದು ತಿಳಿಸಿದರು.ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಧು ಶ್ರೀನಿವಾಸ್ ಮಾತನಾಡಿ ಯಶಸ್ವಿನಿ ನೊಂದಣಿಗೆ ಡಿಸೆಂಬರ್ ೩೧ ಕೊನೆ ದಿನವಾಗಿದೆ ಎಂದರು. ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕ ಮಹಮದ್ ಅಬೀದ್ ಹುಸೇನ್ ಮಾತನಾಡಿ ಸಹಕಾರ ಸಪ್ತಾಹದ ದ್ದೇಯೋದ್ದೇಶ, ನಮ್ಮ ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿದೆ. ನಮ್ಮ ದೇಶ ಪ್ರಜಾಪ್ರಭುತ್ವದ ದೇಶ, ಈ ದೇಶವನ್ನು ಪ್ರಜೆಗಳೇ ನಾವೇ ಆಳಬೇಕಾಗಿದೆ ಎಂದು ಹೇಳಿದರು.ಹೆಚ್.ಎಂ.ದ್ಯಾಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾತನಾಡಿ ಲೆಕ್ಕ ಪತ್ರ ಸರಿಯಾಗಿದ್ದರೆ ಸಹಕಾರ ಸಂಘದ ಆಡಳಿತ ಉತ್ತಮವಾಗಿರುತ್ತದೆ. ಕಾಲಕಾಲಕ್ಕೆ ಆಗುವ ಕಾನೂನು ಕಾನೂನು ತಿದ್ದುಪಡಿಗಳ ಕುರಿತು ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಯೂನಿಯನ್ ಜಾಗೃತಿ ಮೂಡಿಸಲಿದೆ. ಸಹಕಾರ ಸಂಘಗಳಲ್ಲಿ ಆಡಳಿತ ಮಂಡಳಿಗಳು ಭಾಗವಹಿಸುವಂತೆ ಬದ್ದತೆಯನ್ನು ಮೂಡಿಸಬೇಕು ಹಾಗೂ ಸಹಕಾರ ಸಂಘಗಳ ದ್ದೇಯೋದ್ದೇಶಗಳ ಬಗ್ಗೆ ಸಹಕಾರ ಚಳುವಳಿಯಲ್ಲಿ ಒಬ್ಬ ದಡ್ಡನಿಗೋ ಬ್ಯಾಂಕಿನಲ್ಲಿ ಕೂರಿಸಿ ತಿಳುವಳಿಕೆ ನೀಡಬೇಕು. ಬ್ಯಾಂಕಿನಲ್ಲಿ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಬೇಕು , ಈ ಸಂಘಗಳ ವಹಿವಾಟಿನ ಡಿಜಿಟಲೀಕರಣಕ್ಕೆ ಕೇಂದ್ರ ವಿಶೇಷ ಆಸಕ್ತಿ ವಹಿಸಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಯೂನಿಯನ್ ನಿರ್ದೇಶಕರುಗಳಾದ ಜೆ.ಶಿವಪ್ರಕಾಶ್, ಜಿ.ಈ.ಅಜ್ಜಪ್ಪ, ಕೆ.ಹೆಚ್.ಜಗನ್ನಾಥ್, ರತ್ನಮ್ಮ ಟಿ.ಮಹಂತೇಶ್, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಜಿ.ಪಿ.ಯಶವಂತರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಹೆಚ್.ಎಂ.ಮಂಜುನಾಥಪ್ಪ, ಜಿಲ್ಲಾ ತೋಟದ ಬೆಳೆಗಾರರ ಮತ್ತು ಸಂಸ್ಕರಣ ಸಹಕಾರ ಸಂಘ ದ ಅಧ್ಯಕ್ಷ ಜಿ.ಡಿ.ಕೆಂಚವೀರಪ್ಪ, ಎನ್.ಜಯರಾಂ, ಟಿ.ಮಧು ಶ್ರೀನಿವಾಸ್, ಕೃಷ್ಣಮೂರ್ತಿ ಕೆ, ತಾಂಬೂಟಿ, ಹೆಚ್.ಹಿಮಂತ್ ರಾಜ್, ವಿನೂತ್ ಕುಮಾರ್, ಪಿ.ಎಂ.ರಂಜಿತ ಉಪಸ್ಥಿತರಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಸಿ.ಚನ್ನಕೇಶವ ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ಸರಳೀಕರಣ, ರಪ್ತು ವೃದ್ಧಿಗಾಗಿ ಜೆಮ್- ಪೋರ್ಟಲ್ ಬಳಕೆ ವಿಷಯ ಕುರಿತು ಉಪನ್ಯಾಸ ನೀಡಿದರು. ಯೂನಿಯನ್ ಸಿಬ್ಬಂದಿ ಟಿ.ಎನ್.ಶ್ರೀನಿವಾಸ್ ಪ್ರಾರ್ಥಿಸಿದರು. ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ನಾಗರಾಜ ಪಾಟೀಲ್ ನಿರೂಪಿಸಿ ವಂದಿಸಿದರು.