i
ಜೆಜೆಹಟ್ಟಿ ಡಾ.ತಿಪ್ಪೇಸ್ವಾಮಿಗೆ ಹಿರಿಯೂರು ವಕೀಲರ ಸಂಘ ಬೆಂಬಲ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು: ಇದು ಒಂದು ದೊಡ್ಡ ಸ್ಥಾನ ವಕೀಲ ಯಾರಿಗಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜಕಾರಣ ಮಲಿನವಾಗಿದೆ ರಿಯಲ್ ಎಸ್ಟೇಟ್ ಮಾಫಿಯಾ, ದಲ್ಲಾಳಿ, ಶೇರ್ ಮರ್ಚೆಂಟ್ಸ್, ಕಾಳಸಂತೆ ಕೋರರು, ಇವತ್ತು ರಾಜಕೀಯ ಮಾಡುತ್ತಿದ್ದಾರೆ ವಕೀಲರು ಕೋರ್ಟಿಗಷ್ಟೇ ಸೀಮಿತವಾಗಿರದೆ ಎಲ್ಲಾ ರಾಜಕೀಯದಲ್ಲಿ ಭಾಗವಹಿಸಬೇಕಾಗಿದೆ ಎಂದು ವಕೀಲರುಗಳು ಅಭಿಪ್ರಾಯಪಟ್ಟರು.
ಹಿರಿಯೂರು ವಕೀಲರ ಭವನದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಬಿ.ತಿಪ್ಪೇಸ್ವಾಮಿ ಅವರನ್ನು ಬೆಂಬಲಿಸಲು ಕರೆಯಲಾಗಿದ್ದ ಸಭೆಯಲ್ಲಿ ವಕೀಲರುಗಳು ಒಮ್ಮತದ ಅಭಿಪ್ರಾಯಕ್ಕೆ ಬುಂ ಬೆಂಬಲ ನೀಡಲು ನಿರ್ಣಯ ಕೈಗೊಂಡರು.
ವಕೀಲರು ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ವಕೀಲರು ಇರುವುದರಿಂದ ಇವತ್ತು ಸಂವಿಧಾನ ಉಳಿದಿದೆ, ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ವಕೀಲರ ಪಾತ್ರ ಮಹತ್ವಾರವಾಗಿದೆ, ಈ ಹಿಂದೆ ಸಿವಿಲ್ ಮತ್ತು ಕ್ರಿಮಿನಲ್ ಮುಖದ ಮೇಲೆ ಬಿಟ್ಟರೆ ಬೇರೆ ಮೊಕದ್ದಮೆಗಳು ಇರುತ್ತಿರಲಿಲ್ಲ, ಈಗ ವಕೀಲರು ಇರತಕ್ಕದಂತ ಕ್ಷೇತ್ರಗಳೇ ಇಲ್ಲ ಅದು ಕಾರ್ಪೊರೇಟ್ ಪ್ರಕರಣ, ಸಾಮಾನ್ಯ ಪ್ರಕರಣ, ಹಸಿರು ನ್ಯಾಯ ಪೀಠ ವಾಗಿರಬಹುದು, ಬಂಧಿಸುವ ಪ್ರಕರಣಗಳಾಗಿರಬಹುದು, ನಾಗವೇಷಲ್ ಇನ್ಸ್ಟ್ರುಮೆಂಟ್ ಪ್ರಕರಣಗಳಾಗಿರಬಹುದು ಹೀಗೆ ವಕೀಲರಿಗೆ ಅವಕಾಶವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರಗಳತ್ತ ವಕೀಲರ ಆಸಕ್ತಿ ಕಡಿಮೆಯಾಗಿದೆ ನಿಜವಾಗಿಲೋ ಪ್ರಥಮ ಆದ್ಯತೆ ರಾಜಕೀಯ ಕ್ಷೇತ್ರವಾಗಬೇಕಾಗಿದೆ, ವಕೀಲರು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾದರೆ ಬಲಿಷ್ಠ ಹಾಗೂ ಸಶಕ್ತ ಸಮಾಜವನ್ನು ಕಾನೂನಿನ ಚೌಕಟ್ಟಿನಲ್ಲಿ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿ ಈನಿಟ್ಟಿನಲ್ಲಿ ವಕೀಲರಾಗಿರುವ ಡಾ.ತಿಪ್ಪೇಸ್ವಾಮಿ ಅವರಿಗೆ ಬೆಂಬಲ ನೀಡುತ್ತಿದ್ದೇವೆಂದು ಎಂದು ಹೇಳಿದರು.
ಯಾವುದೇ ಒಬ್ಬ ವ್ಯಕ್ತಿ ಬಂದು ತನಗೆ ಅನ್ಯಾಯ ವಾಗಿದೆ ಎಂದು ರಾಜಕೀಯ ಕ್ಷೇತ್ರದಲ್ಲಿರುವ ವಕೀಲರಿಗೆ ಹೇಳಿಕೊಂಡರೆ ನಾನು ಇದ್ದೇನೆ ನೀನು ಧೈರ್ಯವಾಗಿರು ಎನ್ನುವ ಶಕ್ತಿ ವಕೀಲರಿಗೆ ಮಾತ್ರ ಇರುತ್ತದೆ ಅಥವಾ ಯಾವುದಾದರೂ ಅಕ್ರಮ ದಾರಿಗೆ ಹೋದರೆ ಕಾನೂನಿನ ಪರಿಣಾಮದ ಬಗ್ಗೆ ರಾಜಕೀಯ ಸೇರದ ಕ್ಷೇತ್ರದಲ್ಲಿರುವ ವಕೀಲರು ಹೇಳಲು ಸಾಧ್ಯ, ವಕೀಲರು ತಮ್ಮ ದುಡಿಮೆ ತಮ್ಮ ಕಚೇರಿಗೆ ಸೀಮಿತವಾಗದೆ ರಾಜಕೀಯ ಕ್ಷೇತ್ರಗಳಾದ APMC, TAPMC, ಸಹಕಾರ ಕ್ಷೇತ್ರ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಎಂಎಲ್ಎ, ಎಂಪಿ, ಚುನಾವಣಾ ರಾಜಕೀಯದಲ್ಲಿ ಪಾಲ್ಗೊಂಡು ಬಲಿಷ್ಠ ಸಮಾಜ ಕಟ್ಟಲು ಆಸಕ್ತಿ ತೋರಬೇಕೆಂದು ಎಂದು ತಿಳಿಸಿದರು. ಡಾ.ಬಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಬಿ.ತಿಪ್ಪೇಸ್ವಾಮಿ ಮಾತನಾಡಿ, ಸ್ಥಳೀಯ ಅಭ್ಯರ್ಥಿಯ ಆಯ್ಕೆ ವಕೀಲರುಗಳು ಸೇರಿದಂತೆ ಎಲ್ಲ ಮತದಾರರದ್ದಾಗಲಿ, ಏಕೆಂದರೆ ಸ್ಥಳೀಯರಿದ್ದರೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯ. ಸ್ಥಳೀಯನಾದ ನನಗೆ ವಕೀಲರು ಬೆಂಬಲ ನೀಡುವ ಮೂಲಕ ನೈತಿಕ ಸ್ಥೈರ್ಯ ತುಂಬಬೇಕು ಎಂದರು ಮನವಿ ಮಾಡಿದರಲ್ಲದೆ ಜಗತ್ತಿನಲ್ಲಿ ಯಾವುದೇ ಅಥವಾ ಯಾರನ್ನಾದರೂ ಪ್ರಶ್ನೆ ಮಾಡುವುದು ಇದ್ದರೆ ಅದು ವಕೀಲರಿಗೆ ಮಾತ್ರ ಎಂದು ತಿಳಿಸಿದರು. ಹಿರಿಯೂರು ತಾಲ್ಲೂಕ್ ಸಂಘದ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ ಡಾ. ಬಿ ತಿಪ್ಪೇಸ್ವಾಮಿ ರವರು ವಕೀಲ ಸಂಘದ ಸದಸ್ಯರಾಗಿರುವುದರಿಂದ ನಮ್ಮ ಕುಟುಂಬದ ಸದಸ್ಯರಿದ್ದಂತೆ ಇವರಿಗೆ ನಮ್ಮ ವಕೀಲರ ಸಂಘದಿಂದ ಸಂಪೂರ್ಣ ಬೆಂಬಲವಿರುತ್ತದೆ ಎಂದು ಹೇಳಿದರು. ಮಾಜಿ ಅಧ್ಯಕ್ಷ ಹಾಗೂ ನಗರ ಸಭಾ ಸದಸ್ಯ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ ಸ್ಥಳೀಯ ಅಭ್ಯರ್ಥಿ ತಿಪ್ಪೇಸ್ವಾಮಿಯವರು ಈ ಹಿಂದೆ 2009 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಪರಾಭಗೊಂಡಿದ್ದರು ಆದರೆ ಅಲ್ಲಿಂದ ಇಲ್ಲಿವರೆಗೂ ಅವರು ಸುಮ್ಮನೆ ಕೂರದೆ ಕ್ಷೇತ್ರಗಳನ್ನು ಸುತ್ತುವರಿದು ಎಲ್ಲರ ಜನಮನಗಳನ್ನು ಗೆದ್ದಿದ್ದಾರೆ ಮತ್ತು ತಮ್ಮದೇ ಆದ ಚಾಕುವನ್ನು ಮೂಡಿಸಿದ್ದಾರೆ ಇವರಿಗೆ ವಕೀಲರ ಸಂಘದ ಸದಸ್ಯರ ಪರವಾಗಿ ಸಂಪೂರ್ಣ ಬೆಂಬಲ ಸೂಚಿಸುತ್ತೇನೆ ಎಂದು ಹೇಳಿದರು. ವಕೀಲರ ಸಂಘದ ಕಾರ್ಯದರ್ಶಿ ಚಿತ್ರಲಿಂಗಪ್ಪ ಮಾತನಾಡಿ ಮನ ಮನೆಗೆದ್ದು ಮಾರುಗೆದ್ದು ಊರಿಗೆಲ್ಲೊ ಎನ್ನುತ್ತಾರೆ. ಈಗ ನಮ್ಮ ಮನ ಮನೆ ಗೆಲ್ಲಲು ಬಂದಿದ್ದಾರೆ ಹಾಗಾಗಿ ಸ್ಥಳೀಯ ಅಭ್ಯರ್ಥಿ ಆಕಾಂಕ್ಷಿ ಯಾದ ಡಾ. ಬಿ ತಿಪ್ಪೇಸ್ವಾಮಿ ರವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದರು. ಈ ಸಭೆಯಲ್ಲಿ ಉಪಾಧ್ಯಕ್ಷೆ ಬೀನಾರಾಣಿ, ವಕೀಲರಾದ ಯಲ್ಲಪ್ಪ ಹೆಚ್, ಬಬ್ಬೂರ್ ಸುರೇಶ್, ಸತೀಶ್ ಬಾಬು, ರಂಗನಾಥ್, ಆರಿಫುಲ್ಲಾಖಾನ್, ಎಚ್ಪಿ ಮಹಂತೇಶ್, ಆದಿಮೂರ್ತಿ, ಸೈಯದ್ ನವಾಜ್, ಕಾಂತರಾಜ್ ಮತ್ತು ಹಿರಿಯ ಕಿರಿಯ ವಕೀಲರು ಈ ಸಭೆಯಲ್ಲಿ ಹಾಜರಿದ್ದರು.