![](https://www.chandravallinews.com/wp-content/uploads/2023/12/WhatsApp-Image-2023-12-01-at-4.31.27-PM-1.jpeg)
i
ಚಲನಚಿತ್ರ ಸಂಘದಲ್ಲಿ ಅವ್ಯವಹಾರ, 7 ಪದಾಧಿಕಾರಿಗಳ ವಜಾ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಪಿ.ಆರ್.ಉಷಾ (ಪದ್ಮಿನಿ) 2023-2026 ಸಾಲಿನಲ್ಲಿ ಅಧ್ಯಕ್ಷರಾಗಿದ್ದೇನೆ. 2023 ರಂದು ಮಾರ್ಚ್ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ನಿಕಟಪೂರ್ವ ಅಧ್ಯಕ್ಷರಾದ ಡಿಂಗ್ರಿ ನಾಗರಾಜ್, ಆಡುಗೋಡಿ ಶ್ರೀನಿವಾಸ್, ಕಾರ್ಯದರ್ಶಿ ನವನೀತಂ, ಖಜಾಂಚಿ ಬಾಲರಾಜ್ ಹಾಗೂ ಹಿನ್ನಿತರೆ 7 ಮಂದಿ ಹಿಂದಿನ ಪದಾಧಿಕಾರಿಗಳು ನೂತನವಾಗಿ ಆಯ್ಕೆಯಾದ ನನಗೆ ಕರ್ತವ್ಯ ನಿರ್ವಹಿಸಲು ಅವಕಾಶ ಕೊಡುತ್ತಿಲ್ಲ. ಇದುವರೆವಿಗೂ ಸಂಘ ಯಾವುದೇ ಲೆಕ್ಕಪತ್ರವನ್ನು ನೀಡಿಲ್ಲ. ಇವರ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ ಅನುಮಾನ ಇದೆ. ಹಿಂದಿನ ಅವ್ಯವಹಾರ ಬಯಲಾಗದ ರೀತಿಯಲ್ಲಿ ಗುಂಪುಗಾರಿಕೆ ಮಾಡಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಬೈಲಾ ಹಾಗೂ ಕಾನೂನನ್ನು ಮೀರಿ ವರ್ತಿಸುತ್ತಿದ್ದಾರೆ. ಸಂಘದ ಹೆಸರಿನಲ್ಲಿ ನಮ್ಮ ಪದಾಧಿಕಾರಿಗಳ ಗಮನಕ್ಕೆ ತರದೆ ನಿಧಿ ಸಂಗ್ರಹಮಾಡಿ ಅವ್ಯವಹಾರ ನಡೆಸುತ್ತಿದ್ದಾರೆ. ಇದು ಸಂಘದ ಬೈಲಾ ವಿರೋಧವಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಮತ್ತು ನ್ಯಾಯಾಲದಲ್ಲಿ ದಾವೆ ದಾಖಲಿಸಿದ್ದೇವೆ. ನ್ಯಾಯಾಲಯ ಇವರ ವಿರುದ್ಧ ತಡೆಯಾಜ್ಞೆ ನೀಡಿದೆ ಎಂದು ಅಧ್ಯಕ್ಷೆ ಪಿ.ಆರ್.ಉಷಾ ಗಂಭೀರ ಆರೋಪ ಮಾಡಿದ್ದಾರೆ.
ನಿಕಟಪೂರ್ವ ಆಡಳಿತ ಮಂಡಳಿಯವರು ಇಂದಿಗೂ ತಮ್ಮ ಅಕ್ರಮ ಅವ್ಯವಹಾರ ಮುಂದುವರೆಸಿದ್ದಾರೆ. ಇದರಿಂದ ಸಂಘದ ಬೈಲಾ ಪ್ರಕಾರ ದಿನಾಂಕ: 28-11-2023 ರಿಂದ ಕಾರ್ಯದರ್ಶಿ ನವನೀತಂ, ಖಜಾಂಚಿ ಬಾಲರಾಜ್, ಉಪಾಧ್ಯಕ್ಷರಾದ ಕವನ ಮತ್ತು ಉಮಾಶಂಕರ್, ಸಹ ಕಾರ್ಯದರ್ಶಿ ಸುಧಾ ಮತ್ತು ವಿಜಯಕುಮಾರ್, ಸುಲೋಚನಾ ರೈ ಒಟ್ಟು ಕಾರ್ಯಕಾರಿ ಸಮಿತಿಯ 7 ಮಂದಿ ಪದಾಧಿಕಾರಿಗಳನ್ನು ವಜಾಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಮುಂದೆ ಸಂಘದ ಹೆಸರಿನಲ್ಲಿ ಇವರುಗಳು ನಡೆಸುವ ಕಾರ್ಯಕ್ರಮಗಳಿಗೆ ನಿಧಿ ಸಂಗ್ರಹ ನೀಡಬಾರದೆಂದು, ಪ್ರೋತ್ಸಾಹಿಸಬಾರದು ಎಂದು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಧ್ಯಕ್ಷೆ ಪಿ.ಆರ್. ಉಷಾ (ಪದ್ಮಿನಿ) ಮನವಿ ಮಾಡಿದ್ದಾರೆ.