![](https://www.chandravallinews.com/wp-content/uploads/2023/12/WhatsApp-Image-2022-11-19-at-8.55.13-AM.jpeg)
i
ಖಾಸಗಿ ಬಸ್ಸಿನಲ್ಲಿ 4.60 ಲಕ್ಷ ಚಿನ್ನಾಭರಣ ಕಳವು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಳ್ಳರು ತನ್ನ ಕೈಚಳಕ ಮೆರೆದಿದ್ದು ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಸೇರಿದ 4.60 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿ ಆಗಿರುವ ಘಟನೆ ಚಿತ್ರದುರ್ಗ ಸಮೀಪದ ಕುಂಚಿಗನಾಳ್ ಬಳಿ ಶನಿವಾರ ಘಟನೆ ಜರುಗಿದೆ.
ಬೆಳಗಾವಿ ಮೂಲದ ಲತಾ ಎಂಬುವವರಿಗೆ ಸೇರಿದ ಚಿನ್ನಾಭರಣವನ್ನು ಕಳ್ಳರು ಕಳವು ಮಾಡಿದ್ದಾರೆ. ಸಂತ್ರಸ್ತೆ ಲತಾ ಅವರು ಬಸ್ಸಿ ಸ್ಟಾಂಡ್ ನಲ್ಲಿ ತಾನು ಪ್ರಯಾಣಿಸುತ್ತಿದ್ದ ಖಾಸಗಿ ಬಸ್ಸಿನ ಸೀಟ್ ಮೇಲೆ ತನ್ನ ಬ್ಯಾಗ್ ಇಟ್ಟು ಕೆಳಗೆ ಇಳಿದಿದ್ದ ವೇಳೆ ಕೃತ್ಯ ಎಸಗಲಾಗಿದೆ. ಬೆಂಗಳೂರಿಂದ ಬೆಳಗಾವಿಗೆ ತೆರಳುವ ಮಾರ್ಗ ಮಧ್ಯ ಚಿತ್ರದುರ್ಗದಲ್ಲಿ ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ಮಾಡಿದ್ದಾರೆ.