i
ಶಾಲಾ-ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಯಲು ಸೂಚನೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೈಂಗಿಕ ದೌರ್ಜನ್ಯ, ಮಾದಕ ವಸ್ತುಗಳ ಪ್ರಭಾವದಿಂದ ವಿದ್ಯಾರ್ಥಿಗಳನ್ನು ರಕ್ಷಿಸಿ ಅವರ ಸುರಕ್ಷತೆಗೆ ಆದ್ಯತೆಯನ್ನು ನೀಡುವ ಉಪಲಾಷಿತ ಯೋಜನೆ ಕಾರ್ಯಕ್ರಮವನ್ನು ಶಾಲಾ ಕಾಲೇಜುಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಉಪಲಾಷಿತ ಯೋಜನೆಯ ನಿರ್ದೇಶಕರು ತಿಳಿಸಿದ್ದಾರೆ.
ವಿಟಲಿಟಿ ಡಿಜಿಟಲ್ ಟೆಕ್ ಪ್ರತಿಷ್ಠಿತ ಸಂಸ್ಥೆ ಉಪಲಾಷಿತ ಯೋಜನೆ ಎಂಬ ಹೆಸರಿನಲ್ಲಿ ಯಾವುದೇ ಲಾಭದ ಉದ್ದೇಶಹೊಂದದ ಸಮರ್ಪಕವಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲು ಕರ್ನಾಟಕದ ಎಲ್ಲಾ ಜಿಲ್ಲೆಯ ಜಿಲ್ಲಾಡಳಿತಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ ನಿಯಮಾನುಸಾರ ಕಾರ್ಯನಿರ್ವಹಿಸಲು ಮುಂದಾದಾಗ ಜಿಲ್ಲಾಡಳಿತ ಅನುಮೋದನೆ ನೀಡಿದರು ಸಹ ಅದರ ಕೆಲ ಹಂತದ ಅಧಿಕಾರಿಗಳು ಹಾಗೂ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ನಿರ್ಲಕ್ಷ್ಯವನ್ನು ತೋರಿ ನಾನಾ ಕಾರಣಗಳನ್ನು ನೀಡಿ ಈ ಕಾರ್ಯಕ್ರಮವನ್ನು ವಿಫಲಗೊಳಿಸಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ನಡೆದಾಗ ವಹಿಸುವ ಕಾಳಜಿಯನ್ನು ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಯಾಕೆ ನಿರ್ಲಕ್ಷ್ಯ ಎನ್ನುವ ಪ್ರಶ್ನೆ ಜನ ಸಾಮಾನ್ಯರು ಹಾಗೂ ಪೋಷಕರಲ್ಲಿ ಮೂಡುತ್ತಿದೆ. ಅಹಿತಕರ ಘಟನೆಗಳು ನಡೆದಾಗ ವಿಷಾದ ವ್ಯಕ್ತಪಡಿಸುವ ಬದಲು ಇನ್ನು ಮುಂದಾದರೂ ಎಲ್ಲಾ ಹಂತದ ಅಧಿಕಾರಿಗಳು ವಿದ್ಯಾರ್ಥಿಗಳ ಸುರಕ್ಷತೆ ಹಾಗು ಅವರ ವಿಕಾಸದ ಬಗ್ಗೆ, ಗಮನದಲ್ಲಿಟ್ಟುಕೊಂಡು ಸಮರ್ಪಕವಾಗಿ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಇಂತಹ ಉತ್ತಮ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.
ಒಂದು ಪ್ರತಿಷ್ಟಿತ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಮಾದಕ ವಸ್ತುವಿನ ಬಳಕೆಯ ಅಂಕಿ ಅಂಶಗಳು ದಿಗ್ಭ್ರಮೆಗೊಳಿಸುತ್ತದೆ. ಸರಿಸುಮಾರು ಮೂರನೇ ಒಂದು ಭಾಗದಷ್ಟು ವಿದ್ಯಾರ್ಥಿಗಳು ಸಿಎಸ್ಎ ಅನ್ನು ಅನುಭವಿಸುತ್ತಿದ್ದಾರೆಂದು ವರದಿ ಮಾಡಿದ್ದಾರೆ. ಬಹುಪಾಲು ಶೇಕಡ 40 ರಷ್ಟು ವಿದ್ಯಾರ್ಥಿಗಳು ಸಿಎಸ್ಎ ಯ ವಿಷಯ ಬಹಿರಂಗ ಪಡಿಸುವುದರಲ್ಲಿ ಋಣಾತ್ಮಕ ಪರಿಣಾಮಗಳ ಭಯ ಮತ್ತು ತಪ್ಪಿತಸ್ಥ ಭಾವನೆಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆಗುವ ನಿಂದನೆಯಿಂದಾಗಿ ಹಂಚಿಕೊಂಡಿರುವುದಿಲ್ಲ.
ಗುರುತಿನ ಕಾರ್ಡ್ ಮೂಲಕ ವಿದ್ಯಾರ್ಥಿಗಳ ಸುರಕ್ಷತೆ ಹಾಗು ಪೆÇೀಷಕರು ವಿದ್ಯಾರ್ಥಿಗಳ ದಿನಚರಿ ಹಾಗೂ ಅವರ ಅಧ್ಯಯನದ ಮೇಲೆ ಗಮನ ನೀಡುವುದರಿಂದ ಇದರ ಪ್ರಮಾಣವನ್ನು ತಗ್ಗಿಸಬಹುದು. ಈ ಗುರುತಿನ ಕಾರ್ಡ್ ಪಡೆಯಲು ಕೇವಲ ಕಾರ್ಯನಿರ್ವಾಹಣೆ ಶುಲ್ಕ 200/- ರೂಗಳನ್ನು ಮಾತ್ರ ನಿಗದಿ ಮಾಡಲಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಜೊತೆಗೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವಿದ್ಯಾರ್ಥಿವೇತನ, ಪರೀಕ್ಷೆ ತರಬೇತಿ, ಕಾರ್ಯಗಾರಗಳು ಇತರೆ ಹಲವು ಮುಖ್ಯ ಸೇವೆಗಳನ್ನು ಸಹ ನೀಡುತ್ತದೆ. ಈ ಉದ್ದೇಶದಿಂದ ಇನ್ನು ಮುಂದಾದರು ಎಲ್ಲಾ ಹಂತದ ಅಧಿಕಾರಿಗಳು ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅವರ ವಿಕಾಸದ ಬಗ್ಗೆ ಗಮನದಲ್ಲಿಟ್ಟುಕೊಂಡು ಸಮರ್ಪಕವಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯ, ಮಾದಕ ವಸ್ತುಗಳ ಪ್ರಭಾವದಿಂದ ವಿದ್ಯಾರ್ಥಿಗಳನ್ನು ರಕ್ಷಿಸಿ ಅವರ ಸುರಕ್ಷತೆಗೆ ಆದ್ಯತೆ ನೀಡುವಂತಹ ಉತ್ತಮ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.