i
ಅಂತರ್ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾ ಕೂಟಕ್ಕೆ ವಾಲಿಬಾಲ್ ತಂಡ ಆಯ್ಕೆ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ನಗರದ ಸಾಹೇ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಜೊತೆಗ ಕ್ರೀಡಾ ಪಟುಗಳಿಗೆ ಉತ್ತೇಜನ ಮತ್ತು ತರಬೇತಿ ನೀಡಲು ಆದ್ಯತೆ ನೀಡುತ್ತಿರುವುದಾಗಿ ಉಪಕುಲಪತಿ ಡಾ. ಕೆ ಬಿ. ಲಿಂಗೇಗೌಡ ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೇ)ನಲ್ಲಿ ಮಂಡ್ಯದಲ್ಲಿ ಏರ್ಪಟ್ಟಿರುವ ದಕ್ಷಿಣವಲಯ ಅಂತರ್ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿರುವ ವಾಲಿಬಾಲ್ ತಂಡಕ್ಕೆ ತರಬೇತಿ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಪಠ್ಯದ ಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಇನ್ನಷ್ಟು ಕ್ರಿಯಾಶೀಲತೆಯನ್ನು ವಿದ್ಯಾರ್ಥಿಗಳು ಮೈಗೂಢಿಸಿಕೊಳ್ಳುವುದರಿಂದ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಕ್ರೀಡಾ ವಿಭಾಗವನ್ನು ಮೇಲ್ದೆರ್ಜೆಗೇರಿಸಲಾಗಿದೆ. ತರಬೇತಿಗೆ ಬೇಕಾದ ಕ್ರೀಡಾಂಗಣ ಮತ್ತು ಪರಿಕರಗಳನ್ನು ಪೂರೈಸಲು ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಾಹೇ ವಿಶ್ವವಿದ್ಯಾಲಯದ ಪರೀಕ್ಷಾಂಗ ನಿಯಂತ್ರಕ ಡಾ.ಗುರುಶಂಕರ್, ದೈಹಿಕ ನಿರ್ದೇಶಕ ಶಶಿಕುಮಾರ್, ಕೋಚ್ ರುದ್ರೇಶ್ ಕೆ.ಆರ್. ಮತ್ತು ತಂಡದ ಮ್ಯಾನೇಜರ್ ಎಸ್.ದಿವಾಕರ್ ಹಾಜರಿದ್ದರು.