i
ಅತಂತ್ರ ಸ್ಥಿತಿಯಲ್ಲಿ ಪದವಿ ಶಿಕ್ಷಣ-ಎಂ.ಜಿ.ಆರ್…
ಚಂದ್ರವಳ್ಳಿ ನ್ಯೂಸ್ ಹಿರಿಯೂರು: Undergraduate education in precarious condition-MGR…
ಸೇವೆ ಖಾಯಂಗೊಳಿಸುವಂತೆ ಒತ್ತಾಯಿಸಿ ರಾಜ್ಯದ ಸುಮಾರು 430 ಸರ್ಕಾರಿ ಪದವಿ ಕಾಲೇಜುಗಳ 11,000 ದಷ್ಟು ಅತಿಥಿ ಉಪನ್ಯಾಸಕರು ಕಳೆದ ಸುಮಾರು ಇಪ್ಪತ್ತು ದಿನಗಳಿಂದ ಪ್ರತಿಭಟಿಸುತ್ತಿದ್ದು ಪರೀಕ್ಷೆ ಸಮೀಪಿಸಿದಾಗ್ಯೂ ಈ ಶೈಕ್ಷಣಿಕ ವರ್ಷದ ತರಗತಿಗಳು ಪ್ರಾರಂಭಗೊಳ್ಳದೆ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.
ರಾಜ್ಯದ ಶೇ. 90ರಷ್ಟು ಸರ್ಕಾರಿ ಕಾಲೇಜುಗಳು ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಅತಿಥಿ ಉಪನ್ಯಾಸಕರ ಸೇವೆ ಪಡೆಯುತ್ತಿವೆ. ಸುಮಾರು ಆರುನೂರು ವಿದ್ಯಾರ್ಥಿಗಳು ಇರುವ ಕಾಲೇಜಿನಲ್ಲಿ ಹತ್ತು ಹನ್ನೆರಡು ಖಾಯಂ ಉಪನ್ಯಾಸಕರುಗಳೇ ದಿನವಿಡೀ ಬೋಧನೆ ಮಾಡುತ್ತಿದ್ದಾರೆ. ಹಾಗಾಗಿ ಪದವಿ ಕಾಲೇಜುಗಳಲ್ಲಿ ಕಳೆದ ಸುಮಾರು ಇಪ್ಪತ್ತು ದಿನಗಳಿಂದ ವಿದ್ಯಾರ್ಥಿಗಳ ಹಾಜರಾತಿ ಗಣನೀಯವಾಗಿ ಕುಸಿದಿದೆ.
ಪ್ರತಿಪಕ್ಷದ ಸ್ಥಾನದಲ್ಲಿ ಇರುವಾಗ ರಾಜಕೀಯ ಪಕ್ಷಗಳು ಅತಿಥಿ ಉಪನ್ಯಾಸಕರಿಗೆ ತಮ್ಮ ಬೆಂಬಲ ಸೂಚಿಸುತ್ತವೆ. ಭರವಸೆ ನೀಡಿದ ಪಕ್ಷ ಅಧಿಕಾರಕ್ಕೆ ಬಂದ ನಂತರ ಎಲ್ಲವೂ ಮರೆತು ಹೋಗುತ್ತದೆ. ಪ್ರತಿಪಕ್ಷದ ಸ್ಥಾನದಲ್ಲಿ ಇದ್ದಾಗ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು, ತಾವು ಅಧಿಕಾರಕ್ಕೆ ಬಂದರೆ ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸುವ ಭರವಸೆ ನೀಡಿದ್ದರು. ಹಾಗೇ ಅದಕ್ಕೂ ಮುನ್ನ ಬಿಜೆಪಿ ಪಕ್ಷದ ಮುಖಂಡರು ಇದೇ ಬಗೆಯ ಭರವಸೆ ನೀಡಿದ್ತೋರಬೇಕಿದೆ ಗಿ ಎರಡೂ ರಾಷ್ಟ್ರೀಯ ಪಕ್ಷಗಳು ಅತಿಥಿ ಉಪನ್ಯಾಸಕರನ್ನು ಕೇವಲ ಚುನಾವಣೆ ಗೆಲುವಿನ ಮೆಟ್ಟಿಲು ಮಾಡಿಕೊಂಡಂತೆ ಇದೆ.
ಈಗಾಗಲೇ ಸುಮಾರು ಇಪ್ಪತ್ತು ವರ್ಷಗಳ ಕಾಲ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ನೂರಾರು ಮಂದಿ ಉಪನ್ಯಾಸಕರು ಕೊವಿಡ್-19 ಮಾರಕ ಕಾಯಿಲೆಯಿಂದ ಅಸುನೀಗಿದ್ದಾರೆ. ಅವರ ಅವಲಂಬಿತರು ಸ್ಥಿತಿ ಚಿಂತಾಜನಕವಾಗಿದೆ.
ಸರ್ಕಾರ ಈಗ ಅತಿಥಿ ಉಪನ್ಯಾಸಕರಿಗೆ ನೀಡುವ ಗೌರವಧನ ‘ಆನೆ ಹೊಟ್ಟೆಗೆ ಅಪ್ಪಳ ಅಡವೆ? ಎಂಬಂತೆ ಇದೆ. ಇಂದೊ ನಾಳೆಯೊ ತಮ್ಮ ಸೇವೆ ಖಾಯಂ ಆಗುವುದೆಂಬ ಆಸೆಯಿಂದ ಸಾವಿರಾರು ಯುವಕರು ತಮ್ಮ ಅಮೂಲ್ಯ ಆಯಸ್ಸು ಕಳೆದುಕೊಂಡಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಜರುಗಿದ ಅಧಿವೇಶನದುದ್ದಕ್ಕೂ ರಾಜ್ಯದ ಎಲ್ಲಾ ಸರ್ಕಾರಿ
ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು. ಸಾಂಪ್ರದಾಯಿಕ ಪದವಿ ಶಿಕ್ಷಣ ಅತಂತ್ರ ಸ್ಥಿತಿಗೆ ತಲುಪಲು ಬಿಟ್ಟರೆ ನಾಡಿನ ಸಂಸ್ಕೃತಿ, ಸಾಮಾಜಿಕ ಸ್ವಾಸ್ಥ್ಯ, ಶೈಕ್ಷಣಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ಬೀಳಲಿದೆ ಎಂಬುದನ್ನು ಸರ್ಕಾರ ಮನಗಾಣಬೇಕಿದೆ.
ಅತಿಥಿ ಉಪನ್ಯಾಸಕರು ಸೇವೆ ಖಾಯಂಗೊಳಿಸುವಂತೆ ಒತ್ತಾಯಿಸಿ ಪ್ರತಿ ವರ್ಷ ಪ್ರತಿಭಟನೆ, ಮುಷ್ಕರದಲ್ಲಿ ತೊಡಗುವುದರಿಂದ ಕಳೆದ ಕೆಲವು ವರ್ಷಗಳಿಂದ ಪದವಿ ಶಿಕ್ಷಣ ಅಯೋಮಯವಾಗಿದೆ ಎಂಬ ದೂರುಗಳು ಪೋಷಕ ವರ್ಗದಿಂದ ಕೇಳಿ ಬರುತ್ತಿದೆ. ಪ್ರಯುಕ್ತ ಆಡಳಿತ ನಡೆಸುತ್ತಿರುವ ಸರ್ಕಾರ ಹಾಗೂ ಪ್ರತಿಪಕ್ಷಗಳು ಈ ವಿಷಯದಲ್ಲಿ ರಾಜಕೀಯ ಮಾಡದೆ ಪದವಿ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಲು ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸುವ ಔದಾರ್ಯತೆ ತೋರಬೇಕಿದೆ ಎಂದು ವಿಶ್ರಾಂತ ಉಪನ್ಯಾಸಕ, ಸಾಹಿತಿ
ಎಂ.ಜಿ. ರಂಗಸ್ವಾಮಿ, ಹಿರಿಯೂರು ಆಗ್ರಹಿಸಿದರು.