i
ಡಿ.27ರಂದು ಶೋಷಿತ ಸಮುದಾಯಗಳ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಬಸವ ಮೂರ್ತಿ ಮಾದಾರ ಚೆನ್ನಯ್ಯ ಮಠದ ಪಕ್ಕದಲ್ಲಿನ ಮೈದಾನದಲ್ಲಿ 2024ರ ಜನವರಿ ತಿಂಗಳಿನಲ್ಲಿ ಆಯೋಜಿಸಲು ಉದ್ದೇಶಿಸಿರುವ ಶೋಷಿತ ಸಮುದಾಯಗಳ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆಯನ್ನು ಡಿ.27 ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಸಂಚಾರಿ ಪೊಲೀಸ್ ಠಾಣೆ ಪಕ್ಕದ ಬಿ.ಡಿ. ರಸ್ತೆಯ ಎನ್. ಬಿ. ಟಿ ಫಂಕ್ಷನ್ ಹಾಲ್ ನಲ್ಲಿ ಕರೆಯಲಾಗಿದೆ. ಆಯೋಜನೆ ಮಾಡಿರುವ ಸಭೆಗೆ ಎಲ್ಲಾ ಸಮುದಾಯಗಳ ರಾಜ್ಯ ಮುಖಂಡರುಗಳು ಆಗಮಿಸಲಿದ್ದು ಚಿತ್ರದುರ್ಗ ಜಿಲ್ಲೆಯ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸಮುದಾಯಗಳ ಎಲ್ಲಾ ಮುಖಂಡರುಗಳು ಆಗಮಿಸಿ ಬೃಹತ್ ಸಮಾವೇಶದ ಯಶಸ್ವಿಗೊಳಿಸುವ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಪೂರ್ವಭಾವಿ ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಡಬೇಕಾಗಿ ಜಿಲ್ಲೆಯ ಎಲ್ಲಾ ಶೋಷಿತ ಮುಖಂಡರುಗಳಲ್ಲಿ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಬೆಂಗಳೂರು ಇವರು ಮನವಿ ಮಾಡಿದ್ದಾರೆ.