![](https://www.chandravallinews.com/wp-content/uploads/2023/12/New-Doc-12-26-2023-13.47_1_ಜಯರಾಮನಾಯ್ಕ್-1024x1379.jpg)
i
ವಂಗಸಂದ್ರ ಲಂಬಾಣಿಹಟ್ಟಿ ಗ್ರಾಮ ನಿವಾಸಿ ಜಯರಾಮನಾಯ್ಕ್ ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಹೊಸದುರ್ಗ ತಾಲ್ಲೂಕಿನ ವಂಗಸಂದ್ರ ಲಂಬಾಣಿಹಟ್ಟಿ ಗ್ರಾಮ ನಿವಾಸಿ ಜಯರಾಮನಾಯ್ಕ್ (35ವರ್ಷ) ತಂದೆ ಶಿವನಾಯ್ಕ್ ಎಂಬ ವ್ಯಕ್ತಿ ಕಾಣೆಯಾಗಿರುವ ಪ್ರಕರಣ 2023ರ ಮೇ 23 ರಂದು ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಜಯರಾಮನಾಯ್ಕ್ 5 ಅಡಿ ಎತ್ತರವಿದ್ದು, ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದಾರೆ. ಎದೆಯ ಮೇಲೆ ರಾಧ ಎಂಬ ಹಚ್ಚೆ ಗುರುತು ಇರುತ್ತದೆ. ಕನ್ನಡ ಮತ್ತು ಲಂಬಾಣಿ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಮಯದಲ್ಲಿ ಕೆಂಪು ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಬರುಮಡ ಧರಿಸಿರುತ್ತಾರೆ.
ಜಯರಾಮನಾಯ್ಕ್ ಕುರಿತು ಮಾಹಿತಿ ತಿಳಿದು ಬಂದಲ್ಲಿ ಹಿರಿಯೂರು ನಗರ ಠಾಣೆ 08193 263444, ಡಿವೈಎಸ್ಪಿ ಕಚೇರಿ 08193 263499, ಜಿಲ್ಲಾ ನಿಸ್ತಂತು ಕೇಂದ್ರ 08194 222782 ಗೆ ಸಂಪರ್ಕಿಸಬಹುದು ಎಂದು ಹಿರಿಯೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.