i
ಕಾರಿನ ಗ್ಲಾಸ್ ಹೊಡೆದು 10 ಲಕ್ಷ ದೋಚುತ್ತಿದ್ದ ಅಂತರ್ ರಾಜ್ಯ ಕಳ್ಳರ ಬಂಧನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾರಿನ ಗ್ಲಾಸ್ ಹೊಡೆದು 10 ಲಕ್ಷ ದೋಚುತ್ತಿದ್ದ ಅಂತರ್ ರಾಜ್ಯ ಕಳ್ಳರನ್ನು ಹಿಡಿದು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಸದುರ್ಗ ನಗರದ ಹುಳಿಯಾರು ರಸ್ತೆಯಲ್ಲಿರುವ ಬ್ಯಾಂಕ್ ಅಫ್ ಬರೋಡ ಬ್ಯಾಂಕಿನ ಮುಂಭಾಗದಲ್ಲಿ ನಿಂತಿದ್ದ ಕಾರಿನ ಗ್ಲಾಸ್ ಹೊಡೆದು ಕಾರಿನ ಒಳಗಿದ್ದ ೧೦ ಲಕ್ಷ ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ ಪ್ರಕರಣ ಹೊರಬರುತ್ತಿದ್ದಂತೆ ಮಿಂಚಿನ ಕಾರ್ಯಾಚರಣೆ ಮಾಡಿದ ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ.
ಆರೋಪಿ ಮೀನು ವ್ಯಾಪಾರಿ ಬಾನಾಲ ಇಚ್ಕೈಲ್(41) ತಂದೆ ಬಾನಾಲ ಪ್ರಸಂಗಿ ನಲ್ಲೂರು ಜಿಲ್ಲೆಯ ಕವಾಲಿ ತಾಲೂಕಿನ ಕಪ್ಪಾರಲ್ಲ ತಿಪ್ಪ ಗ್ರಾಮದ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಆರೋಪಿ ಕಡೆಯಿಂದ ೭,೦೨,೦೦೦ ರೂ ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಹೊಸದುರ್ಗ ಪೊಲೀಸ್ ನಿರೀಕ್ಷಕ.ತಿಮ್ಮಣ್ಣ ಸೇರಿದಂತೆ ಮತ್ತಿತರ ಸಿಬ್ಬಂದಿಗಳ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ.