i
ಚಂದನ ವಾಹಿನಿಯಲ್ಲಿ ಕೋಟೆ ನಾಡಿನ ಚಿನ್ಮಯಾನಂದರ ಯೋಗ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಧ್ಯ ಕರ್ನಾಟಕದ ಚಿತ್ರದುರ್ಗದಲ್ಲಿ ಯೋಗದ ಮೂಲಕ ಸ್ವಾಸ್ಥ್ಯ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವರುವ ಯೋಗ ಚಾರ್ಯ ಖ್ಯಾತಿಯ ಎಲ್.ಎಸ್. ಚಿನ್ಮಯಾನಂದ ಅವರು ನಡೆಸಿ ಕೊಡುತ್ತಿರುವ ಮಾನಸಿಕ ಸದೃಢತೆಗಾಗಿ ಮತ್ತು ಯೋಗ ಅನ್ನುವುದು ಔಷಧ ರಹಿತ ಚಿಕಿತ್ಸೆ. ಇಂತಹ ಕ್ರಮವನ್ನು ಕಳೆದ ಎರಡು ಮೂರು ದಶಕಗಳಿಂದ ಈ ಭಾಗದಲ್ಲಿ ನಡೆಸಿಕೊಂಡು ಬಂದಿರುವ ಅವರ ಯೋಗಾಸನದ ಕೆಲವು ವಿಧಾನಗಳನ್ನು ಚಂದನ ವಾಹಿನಿಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದಾರೆ.
ಅದರ ಪ್ರಸಾರವು ದಿನಾಂಕ 1-1- 2024 ರಿಂದ 5-1 -2024 ರವರೆಗೆ ಪ್ರತಿದಿನ ಬೆಳಗ್ಗೆ 7:ಗಂಟೆಯಿಂದ 7-20 ರವರೆಗೆ ಬಿತ್ತರಗೊಳ್ಳಲಿದೆ ಎಂದು ಅವರ ಶಿಷ್ಯ ಬಳಗದ ಪ್ರಮುಖ ಮೆಕ್ಯಾನಿಕ್ ರಂಗಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.