i
ಬಿ.ಮಣಿಕಂಠಗೆ ಪಿಹೆಚ್ಡಿ ಪದವಿ ಪ್ರದಾನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲೂಕಿನ ಮದ್ದೇರು ಪಂಚಾಯಿತಿಯ ಹಳೇಹಳ್ಳಿ ಕಣಿವೆ ಗ್ರಾಮದ ನಿವಾಸಿಗಳಾದ ದಿ.ಬಸವರಾಜಪ್ಪ, ದೇವಮ್ಮ ಎಂಬ ಬಡ ದಂಪತಿಗಳ ಮಗನಾದ ಬಿ.ಮಣಿಕಂಠ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಹೆಚ್ಡಿ ಪದವಿ ನೀಡಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಗಂಗಾಧರ ದೈವಜ್ಞ ಇವರ ಮಾರ್ಗದರ್ಶನದಲ್ಲಿ ಸಾದರಪಡಿಸಿದ ‘ಗಡಿನಾಡ ಕನ್ನಡ ಶಾಸನೋಕ್ತ ಸ್ಥಳನಾಮಗಳು‘ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗಿದೆ.