i
ಕೆರೆಯಾಗಳಹಳ್ಳಿ ಟಿ.ತಿಪ್ಪೇಸ್ವಾಮಿಯವರಿಗೆ ಪಿಹೆಚ್ ಡಿ ಪದವಿ ಪ್ರದಾನ…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹೊಳಲ್ಕೆರೆ ತಾಲ್ಲೂಕು ಕೆರೆಯಾಗಳಹಳ್ಳಿ ಗ್ರಾಮದ ದೊಡ್ಡೋಬಜ್ಜರ ತಿಮ್ಮಪ್ಪ ಮತ್ತು ಕೊಲ್ಲಮ್ಮನವರ ಮಗನಾದ ಟಿ.ತಿಪ್ಪೇಸ್ವಾಮಿಯವರು ಫ್ರೊ.ಶಿವಾನಂದ ಕೆಳಗಿನಮನಿ ಅಧ್ಯಾಪಕರು ಮತ್ತು ನಿರ್ದೇಶಕರು ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾಲಯ ಇವರ ಮಾರ್ಗದರ್ಶನದಲ್ಲಿ ”ಫ್ರೊ.ಬಿ.ಕೃಷ್ಣಪ್ಪ ಮತ್ತು ಕರ್ನಾಟಕ ದಲಿತ ಚಳುವಳಿ: ಕನ್ನಡ ಸಾಹಿತ್ಯ ಹಾಗೂ ಪರಿಣಾಮಗಳು ”ಎಂಬ ವಿಷಯ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಇದಕ್ಕೆ ಕುವೆಂಪು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿದೆ. ಪ್ರಸ್ತುತ ಟಿ.ತಿಪ್ಪೇಸ್ವಾಮಿಯವರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಚಿತ್ರದುರ್ಗದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತಿದ್ದಾರೆ.