i
ರಾಮಂದಿರ ಉದ್ಘಾಟನೆ ದಿನ ಸರ್ಕಾರಿ ರಜೆ ಘೋಷಿಸಿ: ಈಶ್ವರಪ್ಪ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ರಾಮ ಭಕ್ತರು ಮಸೀದಿಯನ್ನು ಕೆಡವಿದ ಜಾಗದಲ್ಲಿ ಜ. 22ನೇ ತಾರೀಖಿನಂದು ರಾಮ ಮಂದಿರ ಉದ್ಘಾಟನೆ ಮಾಡುತ್ತಿರುವುದು ಪ್ರಪಂಚದ ರಾಮ ಭಕ್ತರಿಗೆ ಸಂತಸದ ವಿಚಾರ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಮನ ಬಗ್ಗೆ ವರ್ಣನೆ ಮಾಡಲು ಹೋದರೆ ಮಹಾತ್ಮ ಗಾಂಧಿಯವರು ಕಂಡ ಕನಸು ರಾಮ ರಾಜ್ಯ ದ ನೆನಪಾಗುತ್ತದೆ. ರಾಮ ಹೇಗಿದ್ದ ಎಂಬುದಕ್ಕೆ ಗಾಂಧಿಯವರು ಹೇಳಿದ ಮಾತಿನಿಂದ ಗೊತ್ತಾಗುತ್ತದೆ ಎಂದರು.ಶ್ರೀರಾಮ ಮಂದಿರದ ಉದ್ಘಾಟನೆ ದಿನ ಜ.22ರಂದು ರಾಜ್ಯದಲ್ಲಿ ರಜೆ ಘೋಷಣೆ ಮಾಡಿ ಎಂದು ಸರ್ಕಾರವನ್ನು ಮನವಿ ಮಾಡುತ್ತೇನೆ.ಅಯೋಧ್ಯೆ ಗೆ ಹೋಗಿ ನೋಡಲು ಆಗದವರು ಟಿ.ವಿ ಮಾಧ್ಯಮದಗಳ ಮೂಲಕ ನೋಡುತ್ತಿದ್ದಾರೆ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೋಡಲು ಜನರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ರಜೆ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.ರಾಮ ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿದ್ದಾನೆ. ಪ್ರಪಂಚದಲ್ಲಿ ಹಿಂದೂ ಧರ್ಮದ ಬಗ್ಗೆ ಗೌರವ ಬಂದಿದೆ.ಮಹಾತ್ಮ ಗಾಂಧಿಯವರ ಸಮಾಧಿಯಲ್ಲಿ ಹೇರಾಮ್ ಎಂದು ಬರೆಯಲಾಗಿದೆ. ನಮಗೆ ರಾಮ ಮಂದಿರ ನೋಡುವ ಭಾಗ್ಯ ಬಂದಿದೆ. ಕಾರ್ಯಕ್ರಮವನ್ನು ನೋಡಲು ಸರ್ಕಾರ ರಜೆ ಕೊಟ್ಟು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.