i
ದಲಿತ ಮುಖಂಡ ರಾಮದಾಸ ಜಮೀನಿನಲ್ಲೇ ರಾಮಮಂದಿರ ನಿರ್ಮಾಣ- ದೇವೇಗೌಡ…
ಚಂದ್ರವಳ್ಳಿ ನ್ಯೂಸ್, ಮೈಸೂರು:
ಆಯೋಧ್ಯೆ ರಾಮಮಂದಿರದ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಮೈಸೂರು ತಾಲ್ಲೂಕಿನ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿಯ ಕೃಷ್ಣ ಶಿಲೆ ಬಳಕೆ ಹಿನ್ನಲೆ. ದಲಿತ ಮುಖಂಡ ರಾಮದಾಸ ಎಂಬುವವರ ಜಮೀನಿನಲ್ಲಿ ಸಿಕ್ಕಿದ್ದ ಕೃಷ್ಣ ಶಿಲೆ. ಶಿಲೆ ಸಿಕ್ಕ ಜಾಗದಲ್ಲೆ ರಾಮಮಂದಿರ ನಿರ್ಮಾಣ ಮಾಡ್ತೇವೆ ಎಂದು ಶಾಸಕ ಜಿ.ಟಿ ದೇವೆಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನವರಿ 22 ರಂದು ರಾಮಮಂದಿರದ ಉದ್ಘಾಟನೆ ಆಗುತ್ತಿದೆ. ಇದೇ ಸಂಧರ್ಭದಲ್ಲಿ ರಾಮಲಲ್ಲಾ ಮೂರ್ತಿಗೆ ಕೃಷ್ಣ ಶಿಲೆ ಸಿಕ್ಕ ಹಾರೋಹಳ್ಳಿಯಲ್ಲೂ ಪುಣ್ಯಭೂಮಿ ಪೂಜೆ ನೆರವೇರಿಸಿ ರಾಮ ಭಜನೆ ಮಾಡಿ ರಾಮಮಂದಿಕ್ಕೆ ಅಡಿಗಲ್ಲು ಹಾಕಲಾಗುವುದು. ಇದಕ್ಕೆ ಜಮೀನಿನ ಮಾಲೀಕ ರಾಮದಾಸ್ ಕೂಡ ಒಪ್ಪಿದ್ದಾರೆ. ಆದಷ್ಟು ಬೇಗ ಅಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿಟಿ ದೇವೆಗೌಡ ಹೇಳಿದರು.