i
ಅಹಿಂದ ಸಂಘಟನೆ ರಾಜ್ಯ ಉಪಾಧ್ಯಕ್ಷರಾಗಿ ಮಾಯಸಂದ್ರ ರಂಗಪ್ಪ ಯಾದವ್ ನೇಮಕ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾಯಸಂದ್ರ ಗ್ರಾಮದ ಮಾಯಸಂದ್ರ ರಂಗಪ್ಪ ಯಾದವ್ ಇವರನ್ನು ಅಹಿಂದ ಸಂಘಟನೆ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಎರಡನೇ ಹಂತದ ಅಹಿಂದ ನಾಯಕರು ಎಂದು ಇವರನ್ನು ಆಯ್ಕೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಜಿಪಂ, ಶಾಸಕರ ಚುನಾವಣೆ ಸೇರಿದಂತೆ ಅಹಿಂದ ಹೆಸರಿನಲ್ಲಿ ರಾಜಕೀಯವಾಗಿ ಬಲಿಷ್ಠರನ್ನಾಗಿ ಮಾಡಬೇಕು. ಅಹಿಂದ ಸಂಘಟನೆ ಕರ್ನಾಟಕ ಸರ್ಕಾರದಿಂದ ನೋಂದಣಿ ಸಂಖ್ಯೆ:DRDW/SOR/497/2023-24 ಅನುಮತಿ ಪಡೆದುಕೊಂಡಿದೆ.ಅಹಿಂದ ಸಮಾಜವನ್ನು ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಸದೃಢ ಮತ್ತು ಬಲಿಷ್ಠ ಮಾಡಲು ಶಿಕ್ಷಣ ಸಂಸ್ಥೆ ಶಾಲೆಗಳು ಮತ್ತು ಬ್ಯಾಂಕುಗಳು ಸ್ಥಾಪಿಸುವ ಗುರಿಯನ್ನು ಈ ಸಂಘಟನೆ ಹೊಂದಿದೆ ಎಂದು ಕರ್ನಾಟಕ ರಾಜ್ಯ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಿನಿ ತಿಳಿಸಿದ್ದಾರೆ.