i
ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಮದುವೆ ದಿಬ್ಬಣದ ಬಸ್ ೩೦ಕ್ಕೂ ಹೆಚ್ಚು ಜನರಿಗೆ ಗಾಯ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಮದುವೆ ಸಮಾರಂಭವನ್ನು ಮುಗಿಸಿಕೊಂಡು ವಾಪಾಸ್ ಹೋಗುವ ಸಂದರ್ಭದಲ್ಲಿ ಒಪ್ಪಂದಪಡೆದಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ರಸ್ತೆಬದಿಯ ಕಂದಕಕ್ಕೆ ಬಿದ್ದ ಪರಿಣಾಮ ಬಸ್ನಲ್ಲಿದ್ದ ಸುಮಾರು ೩೦ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ತಾಲ್ಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಹಳ್ಳಿ ಗೇಟ್ಬಳಿ ಈ ಅಪಘಾತ ಸಂಭವಿಸಿದ್ದು, ಮದುವೆ ಒಪ್ಪಂದ ಪಡೆದ ಕೆಎಸ್ಆರ್ಟಿಸಿ ಬಸ್ ಮದುವೆಗೆ ಆಗಮಿಸಿದ್ದ ಜನರನ್ನು ಕರೆದುಕೊಂಡು ಕಲ್ಬುರ್ಗಿಯಿಂದ ಮಾಗಡಿಗೆ ತಲುಪಬೇಕಿದ್ದು, ಫೆ.೨ರ ಶುಕ್ರವಾರ ಬೆಳಗಿನ ಜಾವ ೫ರ ಸಮಯದಲ್ಲಿ ಅತಿವೇಗವಾಗಿ ಬಂದ ಕೆಎಸ್ಆರ್ಟಿಸಿ ಬಸ್ ಇಟ್ಟಿಗೆ ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಪಡಿಸಿ, ಕಂದಕಕ್ಕೆ ಉರುಳಿದೆ. ಚಾಲಕನ ಅಜಾಗರೂಕತೆಯೇ ಅಪಘಾತ ಕಾರಣ ಎನ್ನಲಾಗಿದೆ.
ಸದರಿ ಅಪಘಾತದಲ್ಲಿ ಮಾಗಡಿ ಮೂಲದ ಲೋಕೇಶ್(೩೧), ಭಾಗ್ಯಲಕ್ಷ್ಮಿ(೩೪) ಜಯರಾಮ್(೪೮), ಪಾಪಣ್ಣ(೬೦), ಸಕ್ರಿಬಾಯಿ(೭೦), ತಾಳಕೇರಪ್ಪ(೬೮), ಪುಟ್ಟರಂಗನಾಯ್ಕ(೬೧), ಶಂಕರ್(೩೫), ಕೃಷ್ಣಬಾಯಿ(೩೫), ಶರಣಸಂಗಪ್ಪ(೩೮), ಲಕ್ಷ್ಮಿಬಾಯಿ(೩೮), ಸರೋeಬಾ(೪೭) ಸೇರಿದಂತೆ ಒಟ್ಟು ೩೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ಧಾರೆ. ಬಸ್ಚಾಲಕ ಬಸವರಾಜ ಜಿ.ಕಂಬಾರ(೩೫) ಗಾಯಾಳುವಾಗಿದ್ದು ಪ್ರಕರಣ ದಾಖಲು ಮಾಡಲಾಗಿದೆ. ತಳಕು ಠಾಣಾ ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾ, ಪಿಎಸ್ಐ ಲೋಕೇಶ್, ಗಾದಿಲಿಂಗ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.