i
ಕಾಡು ಗೊಲ್ಲರ ಕ್ರಿಕೆಟ್ ಕಲರವ– ರಾಜ್ಯಾಧ್ಯಕ್ಷ ಶಿವು ಯಾದವ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ರಿಕೆಟ್ ಕಲರವ ರಾಜ್ಯದ ನಾನಾ ಭಾಗದಲ್ಲಿ ನಿರಂತರವಾಗಬೇಕು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಶಿವು ಯಾದವ್ ತಿಳಿಸಿದರು.
ಹಿರಿಯೂರು ತಾಲೂಕಿನ ಕಿಲ್ಲಾರದಹಳ್ಳಿಯಲ್ಲಿ ಎರಡು ದಿನದ ನಡೆಯುವ ಕಾಡುಗೊಲ್ಲರ ಕ್ರಿಕೆಟ್ ಪ್ರೀಮಿಯಂ ಲೀಗ್ ನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಕ್ರೀಡೆ ತುಂಬಾ ಅಗತ್ಯ ಹಾಗಾಗಿ ಕಾಡುಗೊಲ್ಲ ಸಮುದಾಯದ ಯುವ ಜನತೆ ಆಗಾಗ ಇಂಥ ಕ್ರೀಡೆಗಳನ್ನು ಏರ್ಪಡಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಂಡು ಹೋಗಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾಡುಗೊಲ್ಲ ಯುವಕರಿಗಾಗಿ ಪ್ರತ್ಯೇಕ ಲೀಗ್ ಏರ್ಪಡಿಸಿ ಅದರಲ್ಲಿ ಸುಮಾರು 20 ಕಾಡುಗೊಲ್ಲ ಕ್ರಿಕೆಟ್ ತಂಡಗಳು ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯಿಂದ ಬಾಗವಹಿಸಿರುವುದು ತುಂಬಾ ಸಂತೊಷದಾಯಕ ವಿಷಯವಾಗಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಎರಡನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಜೊತೆಗೆ ಆಟ ಆಡಬೇಕು. ಜಾತಿ ಧರ್ಮ ತಾರತಮ್ಯ ಇಲ್ಲದೆ ಎಲ್ಲರನ್ನು ಬೆಸೆಯೋ ಅಂತಹ ಸಂಬಂಧವನ್ನು ಕ್ರಿಕೆಟ್ ಉಳಿಸುತ್ತದೆ. ಕುರಿ ಕಾಯುವ ಸಮುದಾಯ ಆಧುನಿಕ ಕ್ರೀಡೆಯತ್ತಾ ಸೆಳೆಯುವಂತ ಕಾರ್ಯ ಆಗಬೇಕಾಗಿದೆ. ಆಧುನಿಕ ಜೀವನ ಶೈಲಿಯಲ್ಲಿ ಆಧುನಿಕ ಕ್ರೀಡಾ ಪದ್ದತಿಗಳನ್ನು ಅಳವಡಿಸಿಕೊಂಡಿರುವುದು ತುಂಬಾ ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.
ಕ್ರೀಡೆಯಿಂದ ದೂರ ಸರಿಯುವ ಪೀಳಿಗೆಯನ್ನು ಸೆಳೆಯುವಂತ ಕಾರ್ಯ ಆಗಬೇಕಾಗಿದೆ. ಅದು ಕಾಡುಗೊಲ್ಲರ ಸಮುದಾಯದಿಂದ ಆಗಲಿ. ದೇಸಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕಾದ ಅಗತ್ಯ ಇದೆ. ಕ್ರೀಡೆ ಬಾಂಧವ್ಯವನ್ನು ವೃದ್ಧಿಸವುದರ ಜೊತೆಗೆ ಕಾಡುಗೊಲ್ಲ ಯುವರ ಸಂಘಟನೆಯ ಶಕ್ತಿಯನ್ನು ಬೇಳಸಲಿ ಜೊತೆಗೆ ಕ್ರೀಡೆ ಸಾಮಾಜಿಕ ಸ್ವಾಸ್ಥ್ಯದ ಭಾಗವಾಗಬೇಕು ಎಂದು ತಿಳಿಸಿದರು.
ಚಿತ್ರದುರ್ಗ ಹಿರಿಯೂರು ಚಳ್ಳಕೆರೆ ಹೊಸದುರ್ಗ ಹಾಗೂ ತುಮಕೂರು ಜಿಲ್ಲೆಯ ಶಿರಾ, ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲೂಕಿನಿಂದ ಕ್ರಿಕೆಟ್ ತಂಡಗಳು ಮತ್ತು ಕ್ರೀಡಾಪಟುಗಳು ಹಾಗೂ ಇತರೆ ಭಾಗದಿಂದ 20 ಕ್ಕಿಂತ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಕೆಕೆಎಸ್ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ, ಕೆಕೆಎಸ್ ಸಂಘದ ತಾಲ್ಲೂಕ್ ಅಧ್ಯಕ್ಷ ಹರೀಶ್ ಪೂಜಾರ್, ಹೆಬ್ಬೂರು ಚಿಕ್ಕಣ್ಣ ಸ್ವಾಮಿ, ಅರ್ಚಕ
ಚಿಕ್ಕಣ್ಣ ಸ್ವಾಮಿ, ಪೂಜಾರಿ ಎರ್ರಣ್ಣ, ಯುವ ಸೇನೆಯ ಕೆಂಪರಾಯನಹಟ್ಟಿ ಮಂಜು, ದಸೂಡಿ ಈರಣ್ಣ ಸೇರಿದಂತೆ ಸುತ್ತ ಮುತ್ತಲ ಗ್ರಾಮ ಪಂಚಾಯತಿ ಅದ್ಯಕ್ಷರು ಮತ್ತು ಸದಸ್ಯರು ಹಾಗೂ ಕಿಲಾರದಳ್ಳಿ ಗ್ರಾಮಸ್ಥರು ಮತ್ತಿತರರು ಭಾಗವಹಿಸಿದ್ದರು.