i
ಸತ್ತವರ ಹೆಸರಿನಲ್ಲೂ ಅತಿವೃಷ್ಟಿ ಪರಿಹಾರದ 2 ಕೋಟಿ ರೂ.ಗುಳುಂ…
ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿದ್ದ ಅನ್ನದಾತನಿಗೆ ಸಿಗಬೇಕಾದ ಪರಿಹಾರದ ಹಣ ಗ್ರಾಮ ಆಡಳಿತಾಧಿಕಾರಿ ಹಾಗೂ ಸಿಬ್ಬಂದಿ ಪಾಲಾಗಿದೆ. ರೈತರೇ ಅಲ್ಲದವರಿಗೆ, ಕೃಷಿ ಜಮೀನಿಲ್ಲದವರೂ ಸೇರಿದಂತೆ ಈಗಾಗಲೇ ಮೃತಪಟ್ಟವರ ಹೆಸರಿನಲ್ಲಿ2 ಕೋಟಿ ರೂ. ಲೂಟಿ ಹೊಡೆದಿರುವುದು ತನಿಖೆಯ ವೇಳೆ ಬಯಲಾಗಿದೆ.2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾದ ಅತಿವೃಷ್ಟಿಗೆ ಪರಿಹಾರ ಘೋಷಣೆ ಮಾಡಿದ ಸರಕಾರ ಕೃಷಿ ಬೆಳೆ ಮತ್ತು ತೋಟಗಾರಿಕೆ ಬೆಳೆಗೆ ಪ್ರತ್ಯೇಕ ದರ ನಿಗದಿ ಮಾಡಿತ್ತು.
ಕಡೂರು ತಾಲೂಕಿನ ಕಲ್ಕೆರೆ ಮತ್ತು ಅಂತರಘಟ್ಟೆ ವ್ಯಾಪ್ತಿಯಲ್ಲಿಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಸೇರಿ 2 ಕೋಟಿಗೂ ಅಧಿಕ ಮೊತ್ತವನ್ನು ವಂಚಿಸಿದ್ದಾರೆ. ಆನ್ಲೈನ್ನಲ್ಲಿ ಪಹಣಿ ಕದ್ದು ಅವ್ಯವಹಾರತೋಟಗಾರಿಕೆ ಬೆಳೆಗೆ ಹೆಚ್ಚಿನ ಪರಿಹಾರದ ಮೊತ್ತ ನಿಗದಿಯಾಗಿದ್ದರಿಂದ ರಾಗಿ ಬೆಳೆದ ಜಾಗಕ್ಕೆ ಪಹಣಿಯಲ್ಲಿತೋಟಗಾರಿಕೆ ಬೆಳೆ ಎಂದು ನಮೂದಿಸಿ ಹೆಚ್ಚಿನ ಪರಿಹಾರ ನಿಗದಿ ಮಾಡಲಾಗಿದೆ. ಒಂದೇ ಹೆಸರಿನ ಹಲವರು ಒಂದೇ ಊರಿನಲ್ಲಿದ್ದರೆ ಅವರ ಜಮೀನಿಗೆ ಸಂಬಂಧಿಸಿದ ಪಹಣಿಗಳನ್ನು ಆನ್ಲೈನ್ನಲ್ಲಿಪಡೆದುಕೊಂಡು ಅಷ್ಟೂ ಪರಿಹಾರ ಮೊತ್ತವನ್ನು ಒಬ್ಬರ ಹೆಸರಿಗೆ ವರ್ಗಾಯಿಸಲಾಗಿದೆ.ವ್ಯಕ್ತಿ ಜೀವಂತ ಇಲ್ಲದಿದ್ದರೂ, ಮೃತಪಟ್ಟು 20 ವರ್ಷವಾಗಿರುವವರ ಹೆಸರಿನಲ್ಲಿ ಪರಿಹಾರ ಮೊತ್ತವನ್ನು ಅದೇ ಹೆಸರಿನ ಮೊತ್ತೊಬ್ಬ ವ್ಯಕ್ತಿಗೆ ವರ್ಗಾಯಿಸಲಾಗಿದೆ.
ಅದೇ ಹೆಸರಿನ ವ್ಯಕ್ತಿ ಆ ಊರಿನಲ್ಲಿ ಇಲ್ಲದಿದ್ದರೆ ಬೇರೆ ಊರಿನವರು, ಬೇರೆ ಜಿಲ್ಲೆಯ ವ್ಯಕ್ತಿಯ ಆಧಾರ್ಸಂಖ್ಯೆಗಳನ್ನು ಬಳಸಿಕೊಂಡು ಪರಿಹಾರ ಮೊತ್ತವನ್ನು ವರ್ಗಾವಣೆ ಮಾಡಲಾಗಿದೆ. ಮಧ್ಯವರ್ತಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯ ಕಳ್ಳಾಟ ತನಿಖೆಯಿಂದ ಬಯಲಾಗಿದೆ. 13 ಹಳ್ಳಿಗಳ ರೈತರಿಗೆ ವಂಚನೆಕಲ್ಕೆರೆ ಮತ್ತು ಅಂತಘಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 13 ಹಳ್ಳಿಗಳ ಪೈಕಿ ಹಲವು ರೈತರ ಹೆಸರಿನಲ್ಲಿ ಪರಿಹಾರ ಮೊತ್ತ ಪಾವತಿಯಾಗಿದೆ. ಆದರೆ, ಬಹುತೇಕರಿಗೆ ಈ ಪರಿಹಾರದ ಬಗ್ಗೆ ಮಾಹಿತಿಯೇ ಇಲ್ಲ. ಈ ರೀತಿಯ 948 ಪ್ರಕರಣಗಳ ತನಿಖೆಯನ್ನು ತರೀಕೆರೆ ಉಪ ವಿಭಾಗಾಧಿಕಾರಿ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಆರಂಭಿಸಿದ್ದಾರೆ.