i
ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ಸಲ್ಲಿಕೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಫೇಸ್ಬುಕ್ನಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಅನ್ಯ ಧರ್ಮದವರಿಗೆ ನೋವಾಗಲಿ, ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಮುಸಲ್ಮಾನರ ಧರ್ಮದ ಬಗ್ಗೆ ಕೆಟ್ಟ ಭಾವನೆ ಬರಲಿ ಎಂದು ಹಾಗೂ ಈ ಮೂಲಕ ಸರ್ಕಾರವು ಸಹ ಒಂದು ಧರ್ಮದ ಪರವಿದೆ ಎಂಬ ಭಾವನೆ ಬರುವಂತೆ ಮಾಡಿ ಸಮಾಜದ ಅಶಾಂತಿಗೆ ಕಾರಣಿಭೂತರಾಗಿರುವುದರಿಂದ ಅವರ ವಿರುದ್ದ ಬುಧವಾರ ಇಲ್ಲಿನ ಜಯನಗರ ಪೊಲೀಸ್ ಠಾಣೆಯಲ್ಲಿ ಎನೆಸ್ಯುಐ ದೂರು ನೀಡಿದೆ.
ಎನ್ ಎಸ್ ಯುಐ ಕಾರ್ಯಾಧ್ಯಕ್ಷ ರವಿಕುಮಾರ್, ನಗರಾಧ್ಯಕ್ಷ ಚರಣ್, ಗ್ರಾಮಾಂತರ ಅಧ್ಯಕ್ಷ ಹರ್ಷಿತ್ ಮತ್ತು ಜಿಲ್ಲಾಧ್ಯಕ್ಷ ವಿಜಯ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಸಿದ್ದೇಗೌಡ ಅವರಿಗೆ ದೂರು ನೀಡಲಾಯಿತು.
ದೂರಿನ ಸಾರಾಂಶ:
ಕರ್ನಾಟಕ ಸರ್ಕಾರವು ಈ ಬಾರಿಯ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿಯನ್ನು ಹೊರಡಿಸಿದೆ. ಈ ಪಟ್ಟಿಯಲ್ಲಿ ಮಾ. ೧ರ ಶುಕ್ರವಾರ ವಿಜ್ಞಾನ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ ೨ ರಿಂದ ೫.೧೫ ಗಂಟೆಯ ವರೆಗೆ ನಿಗದಿ ಮಾಡಲಾಗಿದೆ. ಆ ದಿನ ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಯು ಆರಂಭವಾಗುತ್ತಿರುವುದರಿAದ ಬೆಳಗಿನ ಸಮಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಇಟ್ಟಿಲ್ಲ. ಈ ರೀತಿ ಸಮಯ ಹೊಂದಾಣಿಕೆ ಮಾಡಲಾಗಿದೆ. ಉಳಿದ ಎಲ್ಲಾ ಪರೀಕ್ಷೆಗಳು ಸಹ ಬೆಳಗಿನ ಸಮಯಕ್ಕೆ ನಿಗದಿಯಾಗಿವೆ.
ಇದನ್ನೇ ಬಂಡವಾಳ ಮಾಡಿಕೊಂಡ ಚಕ್ರವರ್ತಿ ಸೂಲಿಬೆಲೆ ಈ ಪರೀಕ್ಷಾ ವೇಳಾಪಟ್ಟಿಯಲ್ಲಿ ಮಾ. ೧ ರ ಶುಕ್ರವಾರ ಪರೀಕ್ಷಾ ದಿನವನ್ನು ಎದ್ದು ಕಾಣುವಂತೆ ಮಾಢಿ ಫೇಸ್ಬುಕ್ನಲ್ಲಿ ಹಾಕಿ ಕಾಣುವಂತೆ ಎಲ್ಲಾ ಪರೀಕ್ಷೆಗಳು ಬೆಳಗ್ಗಿನ ವೇಳೆ ಇವೆ. ಆದರೆ ಮಾ. ೧ರ ಪರೀಕ್ಷೆ ಮಾತ್ರ ಶುಕ್ರವಾರ ಮಧ್ಯಾಹ್ನದ ನಂತರ ಇಡಲಾಗಿದೆ. ಏಕೆ? ಓಹ್, ಶುಕ್ರವಾರ ಮುಸ್ಲಿಮ್ ಮಕ್ಕಳಿಗೆ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಬರೆದಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದರಿಂದ ಸಮಾಜದಲ್ಲಿ ಅಶಾಂತಿವುಂಟಾಗಿ ಕೋಮು-ಗಲಭೆ ಆಗುವ ಸಾಧ್ಯತೆಗಳಿರುವುದರಿಂದ ಹಾಗೂ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭೇದ-ಭಾವ ಉಂಟಾಗುವುದರಿಂದ ತಕ್ಷಣವೇ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರುವ ಚಕ್ರವರ್ತಿ ಸೂಲಿಬೆಲೆ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ. ಪೋಸ್ಟಿನ ನಕಲಿ ಕಾಪಿಯನ್ನು ಈ ದೂರಿನೊಂದಿಗೆ ಲಗತ್ತಿಸಿದ್ದಾರೆ.