i
ಒತ್ತಡ ನಿರ್ವಹಣೆ ಮೂಲಕ ಮೆದುಳಿನ ಆರೋಗ್ಯ ಸುಧಾರಣೆ ಆಗಲಿದೆ: ಪ್ರದೀಪ್…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ವಯಸ್ಸಾದಂತೆ ಅರಿವಿನ ಸಾಮರ್ಥ್ಯ, ನೆನಪಿನ ಶಕ್ತಿ ಕ್ಷೀಣಿಸುತ್ತದೆ. ಸಾವಧಾನತೆ, ಧ್ಯಾನ, ಯೋಗ, ಸಮಾಲೋಚನೆಯಂತಹ ಒತ್ತಡ ನಿರ್ವಹಣಾ ಮಾರ್ಗಗಳ ಮೂಲಕ ಮೆದುಳಿನ ಆರೋಗ್ಯ ಮತ್ತು ಅರಿವಿನ ಸಾಮಾರ್ಥ್ಯವನ್ನು ಸುಧಾರಿಸಲು ಸಾಧ್ಯ ಎಂದು ಮೆಗ್ಗಾನ್ ಆಸ್ಪತ್ರೆಯ ಜಿಲ್ಲಾ ಸಂಚಾಲಕ ಪ್ರದೀಪ್ ತಿಳಿಸಿದರು.
ಸ್ನೇಹಾಶ್ರಯ ಹರ್ಬನ್ ಅಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ನಗರದ ಸವಳಂಗ ರಸ್ತೆಯಲ್ಲಿರುವ ಸ್ನೇಹಾಶ್ರಯ ವೃದ್ಧರ ಕುಟೀರದಲ್ಲಿ ಹಮ್ಮಿಕೊಂಡಿದ್ದ ಮೆದುಳಿನ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಹದ ಆರೋಗ್ಯಕ್ಕಾಗಿ ದೈಹಿಕ ವ್ಯಾಯಾಮದಂತೆ ಮೆದುಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಮಾನಸಿಕ ವ್ಯಾಯಾಮವೂ ಮುಖ್ಯವಾಗಿದೆ. ಮೆದುಳು ಚುರುಕುಗೊಳಿಸುವ ಬುದ್ಧಿಮತ್ತೆಯ ಆಟಗಳನ್ನು ಆಡುವುದು, ಓದು, ಮನಸ್ಸಿಗೆ ಮುದ ನೀಡುವ ಕೌಶಲ್ಯಗಳ ಕಲಿಕೆ ಮುಂತಾದ ಚಟುವಟಿಕೆಗಳು ಮೆದುಳನ್ನು ಸಕ್ರಿಯವಾಗಿರಿಸುತ್ತವೆ ಎಂದರು.