![](https://www.chandravallinews.com/wp-content/uploads/2024/02/WhatsApp-Image-2024-02-09-at-7.00.52-PM-1.jpeg)
i
ಬೆಳೆ ವಿಮೆಗೆ ಹಣ ಕಟ್ಟಿದ್ದ 866 ಹಿರಿಯೂರು ರೈತರ ಪ್ರಸ್ತಾವ ತಿರಸ್ಕೃತ: ಆಕ್ಷೇಪಣೆಗೆ ಫೆ-26 ಕೊನೆ ದಿನ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
೨೦೨೨-೨೩ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೊಂದಣಿ ಮಾಡಿಕೊಂಡ ರೈತರ ಪ್ರಸ್ತಾವಗಳನ್ನು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ಹೋಲಿಕೆ ಮಾಡಿದಾಗ ತಾಳೆಯಾಗದೇ ಇರುವ ಒಟ್ಟು 866 ರೈತರ ಪ್ರಸ್ತಾವಗಳು ತಿರಸ್ಕೃತಗೊಂಡಿವೆ.
ಇದರಲ್ಲಿ ಮುಂಗಾರು ಹಂಗಾಮಿನ 612 ಪ್ರಸ್ತಾವನೆಗಳು ಹಾಗೂ ಹಿಂಗಾರು ಹಂಗಾಮಿನ 254 ಪ್ರಸ್ತಾವನೆಯು ತಿರಸ್ಕತಗೊಂಡಿರುತ್ತದೆ. ತಿರಸ್ಕೃತಗೊಂಡಿರುವ ರೈತರ ಮಾಹಿತಿಯನ್ನು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ನೋಟಿಸ್ ಬೋರ್ಡ್ಗಳಲ್ಲಿ ಪ್ರಕಟಿಸಲಾಗಿದೆ. ಫೆಬ್ರವರಿ-26ರ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಅವಕಾಶ ನೀಡಲಾಗಿದೆ.
ಆಕ್ಷೇಪಣೆ ಸಲ್ಲಿಸುವ ರೈತರು ಅರ್ಜಿಯೊಂದಿಗೆ ೨೦೨೨-೨೩ನೇ ಸಾಲಿನ ಬೆಳೆವಿಮೆಗೆ ನೊಂದಾಯಿಸಿರುವ ಬೆಳೆ ನಮೂದಾಗಿರುವ ಪಹಣಿ ಅಥವಾ ಬೆಂಬಲ ಬೆಲೆ ಪ್ರಯೋಜನಾ ಪಡೆದಿದ್ದಲ್ಲಿ ಇದರ ರಶೀದಿ ಅಥವಾ ಎಪಿಎಂಸಿ ಮಾರುಕಟ್ಟಿಯಲ್ಲಿ ಬೆಳೆ ಮಾರಾಟ ಮಾಡಿದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಬೇಕೆಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಪ್ರಕಟಣೆಯಲ್ಲಿ ತಾಲ್ಲೂಕಿನ ರೈತರಿಗೆ ಮನವಿ ಮಾಡಲಾಗಿದೆ ಎಂದು ಹಿರಿಯೂರು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.