![](https://www.chandravallinews.com/wp-content/uploads/2024/02/WhatsApp-Image-2024-02-12-at-9.27.04-PM-1.jpeg)
i
ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸದಿದ್ದರೆ ಉಗ್ರ ಹೋರಾಟ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತೀಯ ಕಿಸಾನ್ ಸಂಘದಿಂದ ವಿಶ್ವೇಶ್ವರಯ್ಯ ಜಲ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ವಿ.ವಿ ಸಾಗರ ಜಲಾಶಯದಿಂದ ನಾಲೆಗಳಿಗೆ ತುರ್ತಾಗಿ ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಲಾಯಿತು.ಪ್ರಕೃತಿಯ ತಾಪಮಾನವು ದಿನೇ ದಿನೇ ಹೆಚ್ಚಾಗಿರುವುದರಿಂದ ಭೂಮಿಯೊಳಗಿನ ಅಂತರ್ಜಲವು ಬತ್ತಿ ಹೋಗಿದೆ ಕಾರಣ ಈ ವರ್ಷ ಮಳೆ ಸರಿಯಾಗಿ ಇಲ್ಲದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ರೈತರು ತನ್ನ ಜಮೀನಿನಲ್ಲಿ ಬೆಳೆದ ಅಡಿಕೆ, ತೆಂಗು, ಮಾವು ಇನ್ನಿತರ ಅಲ್ಪಾವಧಿ ಬೆಳೆಗಳಾದ ಶೇಂಗಾ, ರಾಗಿ, ಈರುಳ್ಳಿ ಮುಂತಾದ ಬೆಳೆಗಳು ಒಣಗುವ ಸ್ಥಿತಿ ಯಲ್ಲಿವೆ. ಆದ್ದರಿಂದ ನಾಲೆಗಳಿಗೆ ನೀರು ಹರಿಸಲು ರೈತ ಮುಖಂಡರು ಮನವಿ ಸಲ್ಲಿಸಿದ್ದರೂ ಸಹ ಜಲಾಶಯದಲ್ಲಿ ನೀರಿನ ಲಭ್ಯತೆ ಇದ್ದರೂ ಕೂಡ ತಾವುಗಳು ಸಂಭಂದಪಟ್ಟವರ ಜೊತೆ ಜಿಲ್ಲಾಧಿಕಾರಿಗಳ ಸಭೆ ಕರೆದು ನೀರು ಹರಿಸುವುದಕ್ಕೆ ನಿರ್ಣಯ ತೆಗೆದುಕೊಳ್ಳದಿರುವುದಕ್ಕೆ ಕಾರಣವೇನು? ಮುಂದಾಗುವ ಅನಾಹುತಕ್ಕೆ ನೀರಾವರಿ ಇಲಾಖೆಯಯೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾತ್ರಿಕೇನಹಳ್ಳಿ ಆರೋಪಿಸಿದರು.
ನಂತರ ತಾಲ್ಲೂಕು ಅಧ್ಯಕ್ಷ ಸುಬ್ರಮಣಿ ಮಾತನಾಡಿ ಈ ರೀತಿಯ ನಿಮ್ಮ ಅಭಿಪ್ರಾಯಗಳು ರೈತರ ಕಳೆದ ಆರು ವರ್ಷದ ಕರಾಳ ಸ್ಥಿತಿ ನೋಡುವುದಕ್ಕೆ ತಾವುಗಳು ರೈತರ ಜೊತೆ ಚೆಲ್ಲಾಟ ವಾಡುವಂತೆ ತೋರುತ್ತಿದೆ.ಆದ್ದರಿಂದ ಈ ಕೂಡಲೇ ರೈತರ ಜೊತೆ ಚೆಲ್ಲಾಟ ವಾಡುವುದನ್ನು ಬಿಟ್ಟು ಸಂಬಂಧಪಟ್ಟವರ ಜೊತೆ ಸಭೆ ಕರೆದು ಈ ವಾರದ ಅಂತ್ಯದೊಳಗಾಗಿ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದಲ್ಲಿ ಚಳುವಳಿಯ ಮುಖಾಂತರ ಉಗ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡದರು.ಈ ಸಂದರ್ಭದಲ್ಲಿ ನೀರಾವರಿ ಸಲಹಾ ಸಮಿತಿ ಸದಸ್ಯ ರಾಮ್ ಕುಮಾರ್ ಲಕ್ಕವ್ವನಹಳ್ಳಿ,ಸುಂದರಣ್ಣ, ಕುಮಾರ್ ದೊಡ್ಡ ಘಟ್ಟ,ರಾಜಣ್ಣ, ದೀಪಕ್ , ಕಾಂತರಾಜು, ಮತ್ತಿತರರು ಹಾಜರಿದ್ದರು.