i
ಹಿರಿಯೂರು ಆಸ್ಪತ್ರೆಯಲ್ಲಿ ಯುನಾನಿ ಚಿಕಿತ್ಸಾ ವಿಭಾಗ ಆರಂಭ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಷ್ಟ್ರೀಯ ಯುನಾನಿ ದಿನಾಚರಣೆಯ ಅಂಗವಾಗಿ ಸೋಮವಾರ ಹಿರಿಯೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ (ಯುನಾನಿ) ಚಿಕಿತ್ಸಾ ವಿಭಾಗವನ್ನು ಆರಂಭಿಸಲಾಯಿತು. ಆಡಳಿತ ವೈದ್ಯಾಧಿಕಾರಿ ಡಾ. ಕುಮಾರ್ ನಾಯ್ಕ್ ಅವರು ಆಯುಷ್ (ಯುನಾನಿ) ವಿಭಾಗ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಎಸ್.ಚಂದ್ರಕಾಂತ್ ನಾಗಸಮುದ್ರ, ಆಯುಷ್ ಪದ್ಧತಿಯಾದ ಯುನಾನಿಯೂ ಒಂದು ಉತ್ತಮ ವೈದ್ಯಪದ್ಧತಿಯಾಗಿದ್ದು, ವಾರದಲ್ಲಿ ಮಂಗಳವಾರ ಹಾಗೂ ಗುರುವಾರ ಈ ಆಸ್ಪತ್ರೆಗೆ ಯುನಾನಿ ವೈದ್ಯ ಡಾ.ಜಿಯಾ ಉರ್ ರೆಹಮಾನ್ ಆಗಮಿಸಲಿದ್ದು, ಸಾರ್ವಜನಿಕರು ಇದರ ಪೂರ್ಣ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಗಳಾದ ಡಾ. ಟಿ.ಶಿವಕುಮಾರ್, ಡಾ.ಜಿಯಾ ಉರ್ ರೆಹಮಾನ್ ಆಯುಷ್ ಸಿಬ್ಬಂದಿ ಬಸವರಾಜ್ ಇದ್ದರು.