i
ಬಂಜೆತನದ ಬಗ್ಗೆ ಇನ್ನು ಬೇಸರ ಬೇಡ-ಲೇಖನ ಡಾ. ಸ್ನೇಹ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ: Don’t worry about infertility anymore – Dr. Friendship…
ಟಿ.ಎಂ.ಎ.ಇ.ಎಸ್. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಅಂಗ ಸಂಸ್ಥೆಯಾದ ಶಿವಮೊಗ್ಗದ ಗೋಪಾಳದಲ್ಲಿರುವ ಶ್ರೀಚಂದ್ರಮೌಳೀಶ್ವರ ಪಂಚಕರ್ಮ ಚಿಕಿತ್ಸಾ ಕೇಂದ್ರದಲ್ಲಿ ಇದೇ ತಿಂಗಳ ಫೆ.೧೯ರಿಂದ ೨೪ ರವರೆಗೆ ಪ್ರತಿ ದಿನ ಬೆಳಿಗ್ಗೆ ೧೦ರಿಂದ ಸಂಜೆ ೫ರವರೆಗೆ ಪ್ರಸೂತಿ ಹಾಗೂ ಸ್ತ್ರೀ ರೋಗ ಸಂಬಂಧಿತ ಕಾಯಿಲೆಗಳಿಗೆ ಮುಖ್ಯವಾಗಿ ಬಂಜೆತನದಂತಹ ಸಮಸ್ಯೆಗಳಿಗೆ ಸ್ತ್ರೀ ರೋಗ ಸಪ್ತಾಹ ಶಿಬಿರ ಜರುಗಲಿದೆ. ತತ್ಸಂಬಂಧ ಈ ಲೇಖನ.
ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಹೇಗೆ ಜೀವನ ಪದ್ಧತಿ ಮತ್ತು ಆಹಾರ ಪದ್ಧತಿಗಳು ಬದಲಾಗುತ್ತಿದೆಯೋ ಹಾಗೆ ಅದಕ್ಕನುಗುಣವಾಗಿ ಹೊಸ ಕಾಯಿಲೆಗಳು ಅಥವ ಮೊದಲೇ ಇರುವ ಕಾಯಿಲೆಗಳ ಪ್ರಭಾವ ಹೆಚ್ಚುತ್ತಿದೆ. ಇದಕ್ಕೊಂದು ಸೂಕ್ತ ಉದಾಹರಣೆ ಎಂದರೆ ಬಂಜೆತನ.
ಏನು ಈ ಬಂಜೆತನ? ಈ ಸಮಸ್ಯೆ ಕೇವಲ ಮಹಿಳೆಯರಿಗೆ ಮಾತ್ರ ಇರುವುದಾ? ಇದಕ್ಕೆ ಕಾರಣಗಳೇನು? ಇದಕ್ಕೆ ಆಯುರ್ವೇದ ಔಷಧ ಪದ್ಧತಿಯಲ್ಲಿ ಚಿಕಿತ್ಸೆ ಇರುವುದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯೋಣ.
ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಯಾವುದೇ ರೀತಿಯ ಗರ್ಭನಿರೋಧಕ ಪದ್ಧತಿಯನ್ನು ಬಳಸದೆ, ನಿಯಮಿತ ಲೈಂಗಿಕ ಸಂಭೋಗದ ನಂತರವೂ ಗರ್ಭಧಾರಣೆಯು ಸಾಧ್ಯವಾಗದಿದ್ದಾಗ ಗಂಡಿನಲ್ಲಿ, ಹೆಣ್ಣಿನಲ್ಲಿ ಅಥವಾ ಇಬ್ಬರಲ್ಲೂ ಸಂತಾನೋತ್ಪತ್ತಿಯ ತೊಂದರೆ ಇದೆ ಎಂದು ಪರಿಗಣಿಸಲಾಗುವುದು. ಈ ಒಂದು ವರ್ಷದ ಅವಧಿಯ ನಂತರ ದಂಪತಿಗಳು ವೈದ್ಯರ ಸಲಹೆಯನ್ನು ಪಡೆಯಬೇಕು.
ವಿಶ್ವ ಆರೋಗ್ಯ ಸಂಘಟನೆಯ ಪ್ರಕಾರ ಪ್ರಪಂಚದಲ್ಲಿ ಈಗ ಶೇಕಡ ೬೦-೮೦ ದಶಲಕ್ಷ ದಂಪತಿಗಳು ಬಂಜೆತನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಬಂಜೆತನದಲ್ಲಿ ಎರಡು ವಿಧ: ಒಂದು ಪ್ರೈಮರಿ ಬಂಜೆತನ ಅಂದರೆ ಒಮ್ಮೆಯೂ ಗರ್ಭ ಧರಿಸಲು ಸಾಧ್ಯವಾಗದಿರುವುದು. ಮತ್ತೊಂದು ಸೆಕೆಂಡರಿ ಬಂಜೆತನ. ಅಂದರೆ ಒಂದು ಮಗುವಿದ್ದು ಅಥವಾ ಒಂದು ಸಲ ಗರ್ಭಧಾರಣೆಯಾಗಿದ್ದು, ಎರಡನೇ ಬಾರಿ ಗರ್ಭ ಧರಿಸುವಲ್ಲಿ ವಿಫವಾಗುವುದು.
ಮಹಿಳೆಯರಲ್ಲಿ ಸಂತಾನಹೀನತೆಯ ಕಾರಣಗಳು: ೧.ಹಾರ್ಮೋನ್ ಸಮಸ್ಯೆಗಳು – ಥೈರಾಯ್ಡ್, ಪ್ರೊಲ್ಯಾಕ್ಟಿನ್ ಹಾರ್ಮೋನ್ ಏರುಪೇರು. ೨. ಅಂಡಕೋಶದ ಸಮಸ್ಯೆ- ಪಿ.ಸಿ.ಒ.ಎಸ್. ೩. ಮುಟ್ಟಿನ ಸಮಸ್ಯೆ ೪. ಗರ್ಭನಾಳದಲ್ಲಿ ಅಡಚಣೆ ( ಫೆಲೋಪಿಯನ್ ಟ್ಯೂಬ್ ಬ್ಲಾಕೇಜ್). ೫. ಗರ್ಭಾಶಂiiದ ಸಮಸ್ಯೆ- ತುಂಬಾ ಚಿಕ್ಕ ಗರ್ಭಾಶಯ, ಗರ್ಭಾಶಯವೇ ಇಲ್ಲದಿರುವುದು ಇನ್ನು ಮುಂತಾದ ಬೆಳವಣಿಗೆಯ ಲೋಪದೋಷಗಳು. ೬. ಬೊಜ್ಜು
ಪುರುಷರಲ್ಲಿ ಸಂತಾನಹೀನತೆಯ ಕಾರಣಗಳು: ೧. ಕಡಿಮೆ ವೀರ್ಯಾಣುಗಳು, ೨. ವೀರ್ಯಾಣುಗಳ ಬೆಳವಣಿಗೆ ಕಡಿಮೆ. ೩. ವೀರ್ಯಾಣುಗಳ ಚಲನೆ ಕಡಿಮೆ. ೪. ವೀರ್ಯಾಣುಗಳೇ ಇಲ್ಲದಿರುವುದು. ೫. ಅವಧಿಗೆ ಮುನ್ನವೇ ಸ್ಖಲನ. ೬. ವೃಷಣದಲ್ಲಿ ದ್ರವ ತುಂಬುವಿಕೆ. ೭. ಅತಿಯಾದ ಹಸ್ತ ಮೈಥುನ. ೮. ಮಧುಮೇಹ, ಥೈರಾಯ್ಡ್, ಮತ್ತು ಬೊಜ್ಜು
ಮಹಿಳೆ ಮತ್ತು ಪುರುಷರಲ್ಲಿ ಸಾಮಾನ್ಯ ಕಾರಣಗಳು: ೧. ಮೈಥುನದ ಬಗ್ಗೆ ತಪ್ಪು ತಿಳುವಳಿಕೆ ಅಥವ ಸರಿಯಾದ ಕ್ರಮ ತಿಳಿಯದೇ ಇರುವುದು. ೨. ಗರ್ಭಧಾರಣ ಕಾಲದ ಬಗ್ಗೆ ತಿಳುವಳಿಕೆ ಇಲ್ಲದಿರುವುದು. ೩. ಮಾನಸಿಕ ಒತ್ತಡ. ೪. ಕಲುಷಿತ ವಾತಾವರಣ. ೫. ಧೂಮಪಾನ ಮತ್ತು ಮದ್ಯ ಸೇವನೆ ೬. ತಪ್ಪು ಆಹಾರ ಮತ್ತು ನಿದ್ರಾಕ್ರಮಗಳು. ೭. ವೈದ್ಯರ ಸಲಹೆ ಇಲ್ಲದೆ ಗರ್ಭನಿರೋಧಕಗಳ ಬಳಕೆ ಮತ್ತು ಗರ್ಭಪಾತ. ೮. ವೈದ್ಯರ ಸಲಹೆ ಇಲ್ಲದೆ ಅತಿ ಔಷಧ ಸೇವನೆ.
ಕೆಲವು ದಂಪತಿಗಳಲ್ಲಿ ಯಾವುದೇ ರೀತಿಯ ಅನಾರೋಗ್ಯವಿಲ್ಲದಿದ್ದರೂ ಸಹ ಬಂಜೆತನ ಬರಬಹುದು. ಬಂಜೆತನವು ದಂಪತಿ ಮತ್ತವರ ಕುಟುಂಬದವರನ್ನು ಚಿಂತೆಗೀಡು ಮಾಡುತ್ತದೆ. ಈ ಚಿಂತೆಗೆ ಆಯುರ್ವೇದ ಔಷಧ ಪದ್ಧತಿಯಲ್ಲಿ ಪರಿಹಾರವಿದೆ.
ಗರ್ಭಧಾರಣೆಗೆ ಮಾಡುವ ಚಿಕಿತ್ಸೆಯಾದ್ದರಿಂದ ಇದನ್ನು ಗರ್ಭಧಾರಣ ವಿದಿ’ ಎಂದು ಕರೆಯಲಾಗುವುದು.
ಪ್ರಸ್ತುತವಾಗಿ ಪ್ರಸಿದ್ಧವಾಗುತ್ತಿರುವ ಗರ್ಭಿಣಿಯರಿಗೆ ನೀಡುವ ಗರ್ಭಸಂಸ್ಕಾರ ಪದ್ಧತಿಗೆ ಗರ್ಭಧಾರಣ ವಿಧಿಯು ಒಂದು ರೀತಿಯ ಅಡಿಪಾಯವೆಂದು ಹೇಳುತ್ತೇವೆ. ಏಕೆಂದರೆ ಗರ್ಭಧಾರಣ ವಿಧಿಯು ಕೇವಲ ಬಂಜೆತನ ಬಾಧಿತರಿಗಷ್ಟೇ ಅಲ್ಲದೆ, ಯಾವ ದಂಪತಿಗಳು ಉತ್ತಮ, ಆರೋಗ್ಯವಂತ ಮಗುವನ್ನು ಪಡೆಯಲು ಬಯಸುತ್ತಾರೋ ಅವರಿಗೂ ಒಂದು ವರದಾನವಾಗಿದೆ.
ಬನ್ನಿ ಚಿಕಿತ್ಸೆಯ ರೀತಿ ಮತ್ತು ಉಪಯೋಗಗಳನ್ನು ತಿಳಿಯೋಣ: ಶೋಧನ ಕರ್ಮ: ಪ್ರಪ್ರಥಮವಾಗಿ ಮಾಡಬೇಕಾದ ಚಿಕಿತ್ಸೆಯು ’ಶೋಧನ ಕರ್ಮ’ ಹೇಗೆ ಒಂದು ಕೊಳೆ ಬಟ್ಟೆಯನ್ನು ಶುದ್ಧಗೊಳಿಸಿದ ನಂತರವೇ ಅದರ ಮೇಲೆ ಬಣ್ಣಗಳಿಂದ ಚಿತ್ರ ಬರೆಯಬಹುದೋ ಹಾಗೆಯೇ ನಮ್ಮ ದೇಹದ ದೋಷಗಳನ್ನು ’ಶೋಧನ ಕರ್ಮ’ದಿಂದ ಶುದ್ಧಗೊಳಿಸಬೇಕು. ಆ ನಂತರ ನೀಡುವ ಔಷಧವು ಅಮೃತದಂತೆ ಕಾರ್ಯ ನಿರ್ವಹಿಸಿ ಫಲ ನೀಡುತ್ತದೆ. ಉತ್ತರ ಬಸ್ತಿ: ಮಹಿಳೆಯರ ಗರ್ಭಕೋಶಕ್ಕೆ ನೇರವಾಗಿ ಔಷಧಿಯನ್ನು ತಲುಪಿಸುವ ವಿಧಾನ, ಪುರುಷರ ಮೂತ್ರನಾಳಗಳ ಮುಖಾಂತರ ಔಷಧಿಯನ್ನು ತಲುಪಿಸುವ ವಿಧಾನ. ಔಷಧಿ ಬಸ್ತಿ: ಸೂಕ್ತವಾದ ಅಡ್ಡ ಪರಣಾಮವಿಲ್ಲದ ಆಯುರ್ವೇದ ಔಷಧಗಳನ್ನು ನಿಗಧಿತ ಅವಧಿಗೆ ನೀಡಲಾಗುತ್ತದೆ.
ವೈದ್ಯರೊಂದಿಗೆ ಆರೋಗ್ಯಕರ ಸಂಭಾಷಣೆ: ಇದು ದಂಪತಿಯ ಆತಂಕ, ಭಯ ಮತ್ತು ಮಾನಸಿಕ ಒತ್ತಡವನ್ನು ದೂರ ಮಾಡಲು ತುಂಬ ಸಹಕಾರಿ.
ಸೂಕ್ತ ಆಹಾರ ಕ್ರಮ, ಯೋಗಾಸನ ಮತ್ತು ಮುದ್ರೆಗಳೂ ಸಹ ಸಹಾಯಕಾರಿಯಾಗುತ್ತವೆ.
ಆಯುರ್ವೇದ ಗರ್ಭಧಾರಣ ವಿಧಿಯ ಉಪಯೋಗ: ೧. ಬಂಜೆತನ ನಿವಾರಣೆ ಮತ್ತು ಸಂತಾನ ಪ್ರಾಪ್ತಿ. ೨. ಗರ್ಭಧಾರಣೆಯ ನಂತರ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ೩. ಭ್ರೂಣದ ಅನಂಗತತೆಗಳು ಆಗುವುದು ಕಡಿಮೆ. ೪. ಹುಟ್ಟುವ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ.
ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವ ದಂಪತಿ ಹಳೆಯ ರಿಪೋರ್ಟ್ ಕಾರ್ಡ್ಗಳನ್ನು ತರಬೇಕು. ಆಯುರ್ವೇದ ಚಿಕಿತ್ಸೆಯನ್ನು ಪಡೆಯುವ ಮೂಲಕ ಉತ್ತಮ ಸಂತಾನದ ಸಂತಸವನ್ನು ದಂಪತಿ ಅನುಭವಿಸಬಹುದಾಗಿದೆ.
ಲೇಖಕರು: ಡಾ. ಸ್ನೇಹ ಕೆ., ಸಹಾಯಕ ಪ್ರಾಧ್ಯಾಪಕರು, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಟಿಎಂಎಇಎಸ್ ಆಯುರ್ವೇದ ಮಹಾವಿದ್ಯಾಲಯ
ಮತ್ತು ಆಸ್ಪತ್ರೆ, ನಿದಿಗೆ ಹಾಗೂ ಸ್ತ್ರೀರೋಗ ವೈದ್ಯರು, ಶ್ರೀ ಚಂದ್ರಮೌಳೀಶ್ವರ ಪಂಚಕರ್ಮ ಚಿಕಿತ್ಸಾ ಕೇಂದ್ರ, ಪ್ರೆಸ್ ಕಾಲೋನಿ, ಕೆನರಾ ಬ್ಯಾಂಕ್ ಹತ್ತಿರ, ಗೋಪಾಳ, ಶಿವಮೊಗ್ಗ. ಮೊ: ೯೬೩೨೧೨೧೧೧೦