i
ಇಂದು ಮತ್ತು ನಾಳೆ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಗೋಪುರ ಮತ್ತು ಕಳಸ ಪ್ರತಿಷ್ಠಾಪನೆ…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿಯಲ್ಲಿ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದ ನೂತನ ಗೋಪುರ ಮತ್ತು ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಫೆ.೧೮ ಮತ್ತು ೧೯ರಂದು ಆಯೋಜಿಸಲಾಗಿದೆ. ಫೆ.೧೮ರ ಬೆಳಗ್ಗೆ ೬ಕ್ಕೆ ಗಂಗಾ ಭಾಗೀರಥಿ ಪೂಜೆ, ಸ್ವಸ್ತಿ ಪುಣ್ಯಾಹ, ಗಣಪತಿ ಪೂಜೆ, ಧ್ವಜಪೂಜೆ, ಆಚಾರ್ಯ ವರುಣ, ನವಗ್ರಹ, ಅಷ್ಠದಿಕ್ಪಾಲಕ, ಪಂಚಬ್ರಹ್ಮ, ವಿಷ್ಣು ಪರಿವಾರ ದೇವತೆ ಆವಾಹನ ಪೂಜೆ, ಅಗ್ನಿ ಪ್ರತಿಷ್ಠಾಪನೆ, ಗಣಪತಿ ಹೋಮ, ಅಷ್ಟದಿಕ್ಪಾಲಕ ಹೋಮ, ರಾಕ್ಷೆಘ್ನ ಹೋಮ, ಪುರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ಆಯೋಜಿಸಲಾಗಿದೆ.ಫೆ.೧೯ರ ಬೆಳಗ್ಗೆ ೬.೫೮ ರಿಂದ ೮.೨೪ ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಗೋಪುರ ಕಳಸ ಸ್ಥಾಪನೆ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಕಳಾಹೋಮ, ಪ್ರಧಾನ ದೇವತೆ ಹೋಮ, ಜಯಾದಿ, ಮಹಾ ಪೂರ್ಣಾಹುತಿ, ಅಷ್ಟಾವಧಾನ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಬಳಿಕ ಬೆಳಗ್ಗೆ ೧೧.೩೦ ರಿಂದ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಚಿತ್ರಹಳ್ಳಿಯ ಹಾಲುಮತಸ್ಥರು ಹಾಗೂ ಚಿತ್ರಹಳ್ಳಿ ಗ್ರಾಮಸ್ಥರು ಮತ್ತು ಭಕ್ತರ ಸಹಕಾರದೊಂದಿಗೆ ನಡೆಯುವ ನೂತನ ಗೋಪುರ ಮತ್ತು ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಬಾಲೇನಹಳ್ಳಿಯ ಮದನ್ ವಿಶ್ವಕರ್ಮ ಮತ್ತು ಸಂಗಡಿಗರಿಂದ ಪೂಜಾ ಕೈಂಕರ್ಯ ನೇತೃತ್ವ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.