i
ಕಾಡು ಹಂದಿ ಭೇಟೆಗೆ ತಂದಿದ್ದ ಸಿಡಿಮದ್ದು ಸ್ಪೋಟ…
ಚಂದ್ರವಳ್ಳಿ ನ್ಯೂಸ್, ಶಿರಾಳಕೊಪ್ಪ:
ಇಂದಿಲ್ಲಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣಕ್ಕೆ ಎಸ್.ಪಿ.ಯವರು ಸ್ಪಷ್ಟನೆ ನೀಡಿದ್ದಾರೆ.
ಇಂದು ಮಧ್ಯಾಹ್ನ ಶಿರಾಳಕೊಪ್ಪ ಬಸ್ ನಿಲ್ದಾಣ ಸಮೀಪ ನಿಗೂಢ ವಸ್ತು ಸ್ಪೋಟಗೊಂಡಿತ್ತು. ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಾಯಾಳುಗಳನ್ನು ಶಿಕಾರಿಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿರಾಳಕೊಪ್ಪದಲ್ಲಿ ಇಂದು ಸಂತೆ ನಡೆಯುತ್ತಿದ್ದು ಸಂತೆ ಮಾಡಲು ಬಂದ ಉಮೇಶ್ ಹಾಗೂ ರೂಪ ಎಂಬುವರು ಬ್ಲಾಂಕೆಟ್ ಖರೀದಿ ಮಾಡಲು ಅವರಿಗೆ ಪರಿಚಯ ಇದ್ದ ಅಂಗಡಿಯೊಂದಕ್ಕೆ ತೆರಳಿದ್ದಾರೆ. ಅಂಗಡಿಯಲ್ಲಿ ಬ್ಲಾಂಕೆಟ್ ಖರೀದಿಸಿದ ನಂತರ ಬ್ಯಾಗ್ ಒಂದನ್ನು ಇಲ್ಲೇ ಇಟ್ಟು ಅರ್ಧ ಗಂಟೆಯಲ್ಲಿ ಸಂತೆ ಮುಗಿಸಿಕೊಂಡು ಬರುವುದಾಗಿ ತೆರಳಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಬ್ಯಾಗ್ ನಿಂದ ವಸ್ತುವೊಂದು ಸ್ಪೋಟಗೊಂಡಿದೆ. ಪ್ರಾಥಮಿಕ ತನಿಖೆ ವರದಿ ಪ್ರಕಾರ ಕಾಡು ಹಂದಿಗೆ ಬಳಸಲು ತಂದಿದ್ದ ಸಿಡಿಮದ್ದು ಸ್ಪೋಟಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್.ಪಿ. ಮಿಥುನ್ ಕುಮಾರ್ ಐಪಿಎಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.