i
ಫೆ.25ರ ಭಾನುವಾರ ಸಂಜೆ ಸಾಹಿತ್ಯ ಹುಣ್ಣಿಮೆಯಲ್ಲಿ ನಗೆಹಬ್ಬ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಪ್ರತಿ ತಿಂಗಳ ಹುಣ್ಣಿಮೆಯಲ್ಲಿ ನಡೆಯುವ ಮನೆ-ಮನ ಸಾಹಿತ್ಯ ಹುಣ್ಣಿಮೆ ೨೨೨ ನೇ ತಿಂಗಳ ಕಾರ್ಯಕ್ರಮ ಫೆ.೨೫ ರಂದು ಭಾನುವಾರ ಸಂಜೆ ೬:೦೦ ಕ್ಕೆ ಚಾಲುಕ್ಯ ನಗರ ಬಡಾವಣೆಯಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಾಹಿತಿಗಳು, ಹಾಸ್ಯ ಕಲಾವಿದರಾದ ರಿಚರ್ಡ್ ಲೂಯಿಸ್, ಕಿರ್ಲೋಸ್ಕರ್ ಸತ್ಯ ಮತ್ತು ತಂಡದವರಿಂದ ನಗೆಹಬ್ಬ ಏರ್ಪಡಿಸಲಾಗಿದೆ. ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಸಹಾಯಕ ಮಹಾ ಪ್ರಬಂಧಕರಾದ ಎಚ್.ಎ. ನಾಗರಾಜ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಚಾಲುಕ್ಯ ನಗರದ ಕುವೆಂಪು ಕ್ಷೇಮಾಭಿವೃದ್ಧಿ ಸೇವಾ ಸಂಘದ ಗೌರವ ಅಧ್ಯಕ್ಷರಾದ ಡಾ. ಬಾಲಸುಬ್ರಹ್ಮಣ್ಯಂ, ಹಿಂದಿನ ಆತಿಥ್ಯ ನೀಡಿರುವ ಫ್ರೆಂಡ್ಸ್ ಸೆಂಟರ್ ಅಧ್ಯಕ್ಷರಾದ ಲೋಕೇಶ್ ಎಸ್. ಕೆ., ಆಡಿಟರ್, ವೇದಿಕೆ ಕೋಶಾಧ್ಯಕ್ಷರಾದ ಎಂ. ಮಧುಸೂದನ್ ಐತಾಳ್, ಉಪಾಧ್ಯಕ್ಷರಾದ ಟಿ. ಕೃಷ್ಣಪ್ಪ, ಭಾರತಿ ರಾಮಕೃಷ್ಣ ಭಾಗವಹಿಸಲಿದ್ದಾರೆ.
ಗಾಯಕರಾದ ತುಳಸಿ ಜಿ., ಆರ್. ಕೋಮಲ, ನಳಿನಾಕ್ಷಿ ಭಾಗವಹಿಸಲಿದ್ದಾರೆ. ಕವಿಗಳಾದ ನಾಜೀಮಾ, ಉಮಾಪತಿ, ಯೋಗೇಂದ್ರ ನಾಯ್ಕ, ಹನಿಗವನ ಹೇಳಲು ಶ್ರೀನಿವಾಸ ನಗಲಾಪುರ, ಎಂ. ಬಾಲರಾಜ್ ಚುರ್ಚುಗುಂಡಿ ಅವರು ಭಾಗವಹಿಸಲಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ಮನಸ್ಸುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅಧ್ಯಕ್ಷ ಡಿ. ಮಂಜುನಾಥ ಮನವಿ ಮಾಡಿದ್ದಾರೆ.