i
ಕಾಂಗ್ರೆಸ್ ಮುಕ್ತ ದೇಶಕ್ಕಾಗಿ ಬಿಜೆಪಿಗೆ 400 ಸ್ಥಾನ, ಕರ್ನಾಟಕದ 28 ಸ್ಥಾನ ಗೆಲ್ಲಿಸಿ-ಮೋದಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ಬಿಜೆಪಿಗೆ 400ಕ್ಕೂ ಅಧಿಕ ಸ್ಥಾನಗಳನ್ನು ನೀಡಬೇಕು ಅಲ್ಲದೆ ಕರ್ನಾಟಕದ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಾಹನಗಳ ಮೂಲಕ ರ್ಯಾಲಿ ನಡೆಸಿ ಅಲ್ಲಮ ಪ್ರಭು ಮೈದಾನಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಸಭಾಂಗಣದ ಒಳಗೆ ತೆರೆದ ವಾಹನದ ರ್ಯಾಲಿ ನಡೆಸಿ ವೇದಿಕೆಗೆ ತೆರಳಿದಾಗ ಇಡೀ ಮೈದಾನದಲ್ಲಿ ಹೈ ಮೋದಿ, ಜೈ ಶ್ರೀರಾಮ್ಎಂಬ ಘೋಷ ವಾಕ್ಯ ಮೊಳಗಿತು. ಭಾಷಣದ ಆರಂಭದಲ್ಲಿ ಶಕ್ತಿ ಸ್ವರೂಪಿಣಿ ಸಿಗಂಧೂರು ಚೌಡೇಶ್ವರಿಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ ಅವರು ಕಾಂಗ್ರೆಸ್ವಿರುದ್ದ ಟೀಕಾ ಪ್ರಹಾರ ನಡೆಸಿದ ಮೋದಿ, ಕಾಂಗ್ರೆಸ್ನದ್ದು ಮೂರು ಅಜೆಂಡಾ. ಅದು ಮೊದಲು ಸುಳ್ಳು ಹೇಳುವುದು. ಸುಳ್ಳನ್ನು ಸಮರ್ಥಿಸಿಕೊಳ್ಳಲು ಮತ್ತೊಂದು ಸುಳ್ಳನ್ನು ಹೇಳುವುದು. ತಾವು ಹೇಳುವ ಸುಳ್ಳನ್ನು ಮತ್ತೊಬ್ಬರ ತಲೆಗೆ ಕಟ್ಟುವುದು ಕಾಂಗ್ರೆಸ್ನ ಅಜೆಂಡಾವಾಗಿ ಮಾರ್ಪಟ್ಟಿದೆ ಇದು ಇತ್ತೀಚಿನ ವರ್ಷಗಳಲ್ಲಿ ಇನ್ನೂ ಹೆಚ್ಚಿದೆ ಎಂದು ಮೋದಿ ಅವರು ವಾಗ್ದಾಳಿ ಮಾಡಿದರು.
ಈ ಲೋಕಸಭಾ ಚುನಾವಣೆ ಮೂಲಕ ಭಾರತದಲ್ಲಿ ಕಾಂಗ್ರೆಸ್ಮುಕ್ತ ವಾತಾವರಣ ನಿರ್ಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಭಾಷಣದುದ್ದಕ್ಕೂ ಕಾಂಗ್ರೆಸ್ವಿರುದ್ದ ಆರೋಪ ಪಟ್ಟಿ ಹೊರಿಸಿದ ಜತೆಗೆ ಬಿಜೆಪಿ ಕೈಗೊಂಡ ಅಭಿವೃದ್ದಿ ಯೋಜನೆಗಳ ಪಟ್ಟಿಯನ್ನು ಮಾಡಿದರು.ಮುಂಬೈನಲ್ಲಿ ನಡೆದ ಇಂಡಿಯಾ ಬ್ಲಾಕ್ನ ಸಭೆಯಲ್ಲಿ ಹಿಂದೂ ವಿರೋಧಿ ನಿರ್ಣಯವನ್ನು ಕೈಗೊಳ್ಳಲಾಗಿದೆ. ಹಿಂದೂಗಳ ಏಳಿಗೆಯನ್ನು ಕಾಂಗ್ರೆಸ್ಸಹಿಸದು. ಇಂತಹ ಹೇಳಿಕೆಯನ್ನು ಬಾಳಾ ಠಾಕ್ರೆ ಕೇಳಿಸಿಕೊಂಡಿದ್ದರೆ ತಕ್ಕ ಉತ್ತರ ನೀಡುತ್ತಿದ್ದರು ಎಂದು ಮೋದಿ ಹೇಳಿದರು.ಬ್ರಿಟಿಷರ ನೀತಿಯಿಂದ ಕಾಂಗ್ರೆಸ್ನವರು ಇನ್ನೂ ಹೊರ ಬಂದಿಲ್ಲ. ಜನರನ್ನು ಒಡೆದು ಆಳುವುದನ್ನು ನಿಲ್ಲಿಸಿಲ್ಲ ಎಂದು ಮೋದಿ ಆಪಾದಿಸಿದರು. ಕರ್ನಾಟಕದ ಕಾಂಗ್ರೆಸ್ನ ಸಂಸದರೊಬ್ಬರು ಕೆಲ ದಿನಗಳ ಹಿಂದೆ ದೇಶ ಒಡೆಯುವ ಮಾತನಾಡಿದರು. ಅವರನ್ನು ಕಾಂಗ್ರೆಸ್ಮೊದಲು ಪಕ್ಷದಿಂದ ಹೊರ ಹಾಕಬೇಕಿತ್ತು. ಅದನ್ನು ಮಾಡಲಿಲ್ಲ. ಬದಲಿಗೆ ಅವರ ಹೇಳಿಕೆಯನ್ನೇ ಸಮರ್ಥಿಸಿಕೊಂಡರು ಎಂದು ಪ್ರಧಾನಿ ಗಂಭೀರ ಆರೋಪ ಮಾಡಿದರು.ಕರ್ನಾಟಕದಲ್ಲೂ ಕಾಂಗ್ರೆಸ್ಸರ್ಕಾರವಿದೆ. ಇಲ್ಲಿ ಇರುವುದು ಒಬ್ಬ ಮುಖ್ಯಮಂತ್ರಿಯಾದರೂ ಛಾಯಾ ಮುಖ್ಯಮಂತ್ರಿ ಇಬ್ಬರು ಇದ್ಧಾರೆ. ಇನ್ನೊಬ್ಬರು ಸೂಪರ್ಸಿಎಂ ಇದ್ದಾರೆ. ದೆಹಲಿಯಿಂದ ಒಬ್ಬರು ಬಂದು ನಿರಂತರವಾಗಿ ಹಣ ವಸೂಲಿ ಮಾಡಿಕೊಂಡು ಹೋಗುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಉಲ್ಲೇಖಿಸದೇ ಕಾಂಗ್ರೆಸ್ ನಾಯಕರ ವಿರುದ್ಧ ಮೋದಿ ಟೀಕಿಸಿದರು.ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿ ಕಟ್ಟಲು ಪಟ್ಟ ಕಷ್ಟವನ್ನೂ ಕಣ್ಣೆದುರು ತೆರೆದಿಟ್ಟರು. ಇಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತ ಮುನ್ಸಿಪಾಲಿಟಿ ಮೆಂಬರ್ಆಗುವ ಪರಿಸ್ಥಿತಿ ಇರಲಿಲ್ಲ. ಆ ಕಾಲದಲ್ಲಿ ಬಿ.ಎಸ್ಯಡಿಯೂರಪ್ಪ ಅವರು ತಮ್ಮ ಯೌವನವನ್ನು ಇಲ್ಲಿ ಬಿಜೆಪಿಗಾಗಿ ಸಮರ್ಪಿಸಿದರು. ಇದು ಯಡಿಯೂರಪ್ಪ ಅವರ ತಪೋ ಭೂಮಿಯಾಗಿ ಬೆಳೆದು ಬಿಜೆಪಿಯ ಶಕ್ತಿಯಾಗಿದೆ ಎಂದು ಮೋದಿ ಸ್ಮರಿಸಿದರು. ಯಾಕೆ ಬಿಜೆಪಿಗೆ 400 ಸ್ಥಾನ ಬೇಕು?ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400ಕ್ಕೂ ಅಧಿಕ ಸ್ಥಾನ ಕೊಡಬೇಕು. ವಿಕಸಿತ ಭಾರತಕ್ಕಾಗಿ, ವಿಕಸಿತ ಕರ್ನಾಟಕಕ್ಕಾಗಿ, ಯುವಜನರ ಆಶಾವಾದ ಪೂರೈಸಲು, ಬಡವರ ಕಲ್ಯಾಣಕ್ಕಾಗಿ, ರೈತರ ಅಭಿವೃದ್ಧಿಗಾಗಿ, ಭಯೋತ್ಪಾದನೆ ನಿಗ್ರಹಕ್ಕಾಗಿ, ಕಾಶ್ಮೀರದ ಅಭಿವೃದ್ಧಿಗಾಗಿ, ಮಹಿಳೆಯರ ಸಬಲೀಕರಣಕ್ಕಾಗಿ ಬಿಜೆಪಿಗೆ 400ಕ್ಕೂ ಅಧಿಕ ಸ್ಥಾನ ಬೇಕು ಎಂದು ಮೋದಿ ಅವರು ಮತದಾರರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ಗೆ ಅಜೆಂಡಾವೇ ಇಲ್ಲ-ದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ಪಕ್ಷಕ್ಕೆ ಒಂದೇ ಒಂದು ಅಜೆಂಡಾವೇ ಇಲ್ಲ ಎಂದು ತೀವ್ರ ವಾಗ್ಬಾಣಗಳಿಂದ ಚುಚ್ಚಿದ ಮೋದಿ ಅವರು ಕಾಂಗ್ರೆಸ್ ಪಕ್ಷದ ಪ್ರಮುಖ ಅಜೆಂಡಾ ಎಂದರೆ ಸುಳ್ಳು ಹೇಳುವುದು. ಒಂದು ಬಾರಿ ಸುಳ್ಳು ಹೇಳುವುದು, ಅದನ್ನು ಮತ್ತೆ ಮತ್ತೆ ಹೇಳುವುದು, ದೊಡ್ಡ ದೊಡ್ಡ ಸುಳ್ಳು ಹೇಳುವುದು, ಸುಳ್ಳುಗಳನ್ನು ನಿಜವೆಂದು ಸಾಧಿಸಲು ಮತ್ತಷ್ಟು ಸುಳ್ಳು ಹೇಳುವುದು ಎಂದು ಕಾಂಗ್ರೆಸ್ ವಿರುದ್ಧ ಮೋದಿ ಅವರು ಗೇಲಿ ಮಾಡಿ, ಒಂದೊಮ್ಮೆ ಏನಾದರೂ ತಪ್ಪು ಮಾಡಿ ಸಿಕ್ಕಿ ಬಿದ್ದರೆ ಅದನ್ನು ಬೇರೆಯವರ ತಲೆಗೆ ಕಟ್ಟಿ ಸುಮ್ಮನಿರುವುದು ಅದರ ಪ್ರಧಾನ ಅಜೆಂಡಾ ಎಂದು ಮೋದಿ ವಾಗ್ದಾಳಿ ಮಾಡಿದರು.
ಕರ್ನಾಟಕದಲ್ಲಿ ಎಷ್ಟು ಸಿಎಂಗಳು ಗೊತ್ತಾ?ಕರ್ನಾಟಕ ರಾಜ್ಯದಲ್ಲಿ ಇರುವುದು ಒಬ್ಬ ಮುಖ್ಯಮಂತ್ರಿಯಲ್ಲ. ಹಲವು ಮುಖ್ಯಮಂತ್ರಿಗಳಿದ್ದಾರೆ. ಒಬ್ಬರು ಸಿಎಂ ಆಗಲು ಕಾಯುತ್ತಿದ್ದಾರೆ, ಅವರು ಸಿಎಂ ಇನ್ವೇಟಿಂಗ್, ಇಲ್ಲಿ ಹಲವರು ಮುಂದಿನ ಸಿಎಂ ಆಗಲು ಆಕಾಂಕ್ಷಿಗಳಾಗಿದ್ದಾರೆ, ಕಾತರರಾಗಿದ್ದಾರೆ. ಇಲ್ಲಿ ಸೂಪರ್ಸಿಎಂಗಳಿದ್ದಾರೆ, ಶ್ಯಾಡೋ (ಛಾಯಾ) ಸಿಎಂಗಳಿದ್ದಾರೆ. ಇವರ ನಡುವೆ ದಿಲ್ಲಿಯ ಒಬ್ಬ ಕಲೆಕ್ಷನ್ಮಿನಿಸ್ಟರ್ಕೂಡಾ ಇದ್ದಾರೆ ಎಂದು ಮೋದಿ ಗಂಭೀರ ಆರೋಪ ಮಾಡಿದರು.ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ನಡೆಸಲು ಮತದಾರರು ಒಂದು ಅವಕಾಶ ನೀಡಿದ್ದಾರೆ. ಜನರು ನೀಡಿರುವ ಅಧಿಕಾರವನ್ನು ಸದುಪಯೋಗಪಡಿಸಿಕೊಳ್ಳುವ ಬದಲು ಅವರು ದುರುಪಯೋಗ ಪಡಿಸಿಕೊಂಡಿದ್ದಾರೆ. ಇಲ್ಲಿ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮಗಳಿಲ್ಲ. ಅಭಿವೃದ್ಧಿಗೆ ನಯಾ ಪೈಸೆ ಕೂಡಾ ಇಲ್ಲ ಎಂದು ಟೀಕಿಸಿದರು.ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ಕಾಂಗ್ರೆಸ್ನ ಎಟಿಎಂ ಮಾಡಿಕೊಳ್ಳಲು ಬಳಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಅಭಿವೃದ್ಧಿಗೆ ಹಣವೇ ಇಲ್ಲದಂತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.ಕಾಂಗ್ರೆಸ್ ಪಕ್ಷದ ಆಡಳಿತ ವೈಫಲ್ಯದಿಂದಾಗಿ ಅವರ ಎಲ್ಲ ಅಪಸವ್ಯಗಳಿಂದ ಜನರು ಎಷ್ಟೊಂದು ಆಕ್ರೋಶಿತರಾಗಿದ್ದಾರೆ ಎಂದರೆ ಈ ಬಾರಿ ಎಲ್ಲ 28 ಸಂಸತ್ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು. ಶಿವಮೊಗ್ಗ, ದಾವಣಗೆರೆ, ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಸಮಾವೇಶ ಇದಾಗಿದ್ದು, ಬಿಜೆಪಿ ಅಭ್ಯರ್ಥಿಗಳಾದ ಬಿ.ವೈ ರಾಘವೇಂದ್ರ, ಗಾಯತ್ರಿ ಸಿದ್ದೇಶ್ವರ್, ಕೋಟ ಶ್ರೀನಿವಾಸ ಪೂಜಾರಿ ಮತ್ತು ಕ್ಯಾ. ಬ್ರಿಜೇಶ್ಚೌಟ ಭಾಗವಹಿಸಿದ್ದರು. ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.