i
ಸೇತುವೆ ಕಾಮಗಾರಿ ವೇಳೆ ಸೆಂಟ್ರಿಂಗ್ ಕುಸಿದು 7 ಜನರಿಗೆ ಗಾಯ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಗ್ಗಲಿಜಡ್ಡು ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನಿರ್ಮಾಣ ಹಂತದಲ್ಲಿ ಸೇತುವೆಯ ಸೆಂಟ್ರಿಂಗ್ ಕುಸಿದು ಏಳು ಕಾರ್ಮಿಕರಿಗೆ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ.
ಕಗ್ಗಲಿಜೆಡ್ಡು ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ೩.೪೮ ಕೋಟಿ ರೂ ವೆಚ್ಚದಲ್ಲಿ ಸೇತುವೆ ಕಾಮಗಾರಿಯನ್ನು ಉಡುಪಿ ಮೂಲದ ಗುತ್ತಿಗೆದಾರ ನಡೆಸುತಿದ್ದು ಈ ಸೇತುವೆಯ ಕಾಮಗಾರಿ ನಡೆಸುತಿದ್ದಾಗ ಸೋಮವಾರ ಸೆಂಟ್ರಿಂಗ್ ಕುಸಿದು ಹಲವು ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ರಿಪ್ಪನ್ಪೇಟೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ದಿದ್ದಾರೆ.
ಘಟನೆಯಲ್ಲಿ ಕಾರ್ಮಿಕರಾದ ಸೊರಬದ ಅರುಣ್ ಕುಮಾರ್(೩೩) ಬಿಹಾರ ಮೂಲದ ದೀಪಕ್ ಕುಮಾರ್(೨೨) ಕುಂದಾಪುರ ಮೂಲದ ಸುಧಾಕರ್(೨೫) ಬಿಹಾರ ಮೂಲದ ಸುರಭ(೧೯) ಬಿಹಾರ ಮೂಲದ ಸುಬೇಧ್ ಕುಮಾರ್ (೨೫) ಬೈಂದೂರಿನ ಅಭಿಮನ್ಯು (೨೮) ಮತ್ತು ಕುಂದಾಪುರ ಮೂಲದ ಸುರೇಂದ್ರ (೨೭) ಗಾಯಗೊಂಡಿದ್ದಾರೆ.
ಸೋಮವಾರ ಸೆಂಟ್ರಿAಗ್ ಕಾಮಗಾರಿಯೆಲ್ಲಾ ಮುಗಿಸಿ ಕಾಂಕ್ರೀಟ್ ಹಾಕುವ ವೇಳೆಯಲ್ಲಿ ತಳಭಾಗದ ಬೆಡ್ ಕುಸಿದು ಏಕಾಏಕಿ ಕುಸಿತ ಉಂಟಾಗಿದೆ. ಸುಮಾರು ೧೦ ಕಾರ್ಮಿಕರು ಸ್ಲ್ಯಾಬ್ ಕೆಲಸದಲ್ಲಿ ನಿರತರಾಗಿದ್ದರು, ಈ ಸಂದರ್ಭ ಏಳು ಕಾರ್ಮಿಕರು ಗಾಯಗೊಂಡಿದ್ದಾರೆ.