i
ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಗರದ ನವುಲೆಯ ಬಳಿ ಸಂಭವಿಸಿದ ಭೀಕರ ಅಪಘಾತ ದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಇಂದಯ ಬೆಳಗ್ಗೆ ನಡೆದಿದೆ.
ಕೆಟಿಎಂ ಬೈಕಿಲ್ಲಿ ಬರುತ್ತಿದ್ದ ಕಾಶಿಪುರದ ನಿವಾಸಿ ಜೆ ಎನ್ ಸಿ ಸಿ ಇ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಕಾರ್ತಿಕ್ (20 )ಸಾವನ್ನಪ್ಪಿದ್ದಾನೆ. ಈತನಮತ್ತು ಎದುರಿಗೆ ಪ್ಯಾಶನ್ ಪ್ರೊ.ಬೈಕಿನಲ್ಲಿ ಬರುತ್ತಿದ್ದ ಇನ್ನೋರ್ವ ಬೈಕ್ ಸವಾರನ ನಡುವೆ ಮುಖಮುಖಿ ಡಿಕ್ಕಿಯಾಗಿದೆ. ನಂತರ ರಭಸದಲ್ಲಿ ಕೆಎಂಎಫ್ ಹಾಲಿನ ವಾಹನಕ್ಕೆ ನೇರ ಗುದ್ದಿ ರಸ್ತೆಗೆ ಹಾರಿ ಬಿದ್ದಿದ್ದಾನೆ.
ಅಫಘಾತದ ಭೀಕರತೆ ಎಷ್ಟಿತ್ತೆಂದರೆ ವಿದ್ಯಾರ್ಥಿಯ ತಲೆ ಒಡೆದು ರಸ್ತೆ ತುಂಬಾ ರಕ್ತ ಚೆಲ್ಲಾಡಿದೆ. ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ.