i
ಮತ್ತೆ ಕಾಂಗ್ರೆಸ್ ನತ್ತ ಮುಖ ಮಾಡಿದ ತೇಜಸ್ವಿನಿ ಗೌಡ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಸ್ವಪಕ್ಷದ ವಿರುದ್ಧ ಸಿಡಿದೇಳುವ ಸಾಧ್ಯತೆ ಇದೆ, ಬಿಜೆಪಿಗೆ ರಾಜೀನಾಮೆ ಕೊಡಲು ಸಿದ್ದರಾಗಿದ್ದು ಇದರ ಜೊತೆಗೆ ಜೂನ್ ತಿಂಗಳಲ್ಲಿ ಅವರ ವಿಧಾನಪರಿಷತ್ ಸದಸ್ಯ ಸ್ಥಾನದ ಅವಧಿಯೂ ಕೊನೆಗೊಳ್ಳಲಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಅಥವಾ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದರು ಸಿಗಬಹುದೆನ್ನುವ ನಂಬಿಕೆ ಕೂಡ ಅವರಿಗೆ ಇತ್ತು ಆದರೆ ಅದು ಈಡೇರಲಿಲ್ಲ ಕಾರಣ ಎರಡೂ ಕ್ಷೇತ್ರಗಳ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ ಇವರಿಗೆ ಟಿಕೆಟ್ ಕೈ ತಪ್ಪಿದೆ? ಇದರ ಬೆನ್ನಲ್ಲೇ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ತೇಜಸ್ವಿನಿ ಗೌಡ ಅವರು,ಮೂಲ ಕಾಂಗ್ರೆಸ್ ಪಕ್ಷದವಾರದ ತೇಜಸ್ವಿನಿ ಚುನಾವಣೆಗೆ ಇಳಿದಿದ್ದರು ಮೊದಲ ರಾಜಕೀಯ ಪ್ರವೇಶದಲ್ಲಿ ತೇಜಸ್ವಿನಿ ಅವರು ಅಂದು ಕನಕಪುರ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಸೋಲಿಸಿ ದೊಡ್ಡ ಹೆಸರು
ಮಾಡಿದ್ದರು . ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನೇ ರಾಜಕೀಯ ಗುರು ಎಂದಿದ್ದ ತೇಜಸ್ವಿನಿ ನಂತರ ಕಾಂಗ್ರೆಸ್ ಕೈಕೊಟ್ಟು ಬಿಜೆಪಿ ಸೇರಿದ್ದರು, ಡಿಕೆಶಿ ಸಹೋದರರ ವಿರುದ್ಧ ಮನಬಂದಂತೆ ಮಾತನಾಡಿದ್ದರು.ಹೊಲಸು ರಾಜಕಾರಣದಲ್ಲಿ ಈಗ ಮತ್ತೆ ಕಾಂಗ್ರೆಸ್ ಸೇರುವ ಇಂಗಿತವನ್ನು ಆಪ್ತರಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ,