i
ಮಹೇಶ್ಗೆ ಪಿಹೆಚ್ಡಿ ಪದವಿ ಪ್ರದಾನ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಬೆಂಗಳೂರು ಜ್ಞಾನಭಾರತಿ ಲೇಔಟ್ನ ಮಹೇಶ ಆರ್. (ಹ.ರಾ.ಮಹೇಶ್) ಬಿನ್ ರಾಮಯ್ಯ ಅವರು ತುಮಕೂರು ವಿಶ್ವವಿದ್ಯಾನಿಲಯದ ಬುದ್ಧಿಸ್ಟ್ ಸ್ಟಡೀಸ್ ವಿಭಾಗದಿಂದ ಮಂಡಿಸಿದ ಮಹಾಪ್ರೌಢ ಪ್ರಬಂಧಕ್ಕೆ ಪಿಹೆಚ್ಡಿ ಪದವಿ ದೊರೆತಿದೆ.
ಮಹೇಶ್ ಅವರು “A STUDY ON GOUTHAMA BUDDHA AND DR.B.R. AMBEDKAR’S POLITICAL PHILOSOPHY AND THEIR RELEVANCE ON CONTEMPORARY DALIT POLITICS” ವಿಷಯ ಕುರಿತು ಮಂಡಿಸಿದ ಪಿಹೆಚ್ಡಿ ಮಹಾ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಲಯ ಪಿಹೆಚ್ಡಿ ಪದವಿ ನೀಡಿದೆ.
ಪ್ರಾಧ್ಯಾಪಕ ಡಾ. ರಮೇಶ್ ಬಿ. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡು ಸಲ್ಲಿಸಿದ ಪ್ರೌಢ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ (ಪಿಹೆಚ್.ಡಿ) ಪದವಿ ನೀಡಿದೆ.