i
ಕಂಟ್ರಿ ಕ್ಲಬ್ಗೆ ಹೋಗುವ ರಸ್ತೆಯಲ್ಲಿ ವ್ಯಕ್ತಿಯ ದರೋಡೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಪೆಟ್ರೋಲ್ಬಂಕ್ಗೆ ಡ್ರಾಪ್ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ದರೋಡೆ ಮಾಡಿದ ಸಂಬಂಧ ಶಿವಮೊಗ್ಗದ ಕೋಟೆ ಪೊಲೀಸ್ಠಾಣೆಯಲ್ಲಿ ಕೇಸ್ದಾಖಲಾಗಿದೆ . ಕಂಪನಿಯೊಂದರಲ್ಲಿ ಕಲೆಕ್ಷನ್ಎಕ್ಸಿಕ್ಯೂಟಿವ್ಆಗಿರುವ ವ್ಯಕ್ತಿಯೊಬ್ಬರು ಆ ದಿನದ 20 ಸಾವಿರ ರೂಪಾಯಿ ಕಲೆಕ್ಷನ್ಹಣವನ್ನು ಸಂಗ್ರಹಿಸಿ ಮರುದಿನ ಮತ್ತೊಂದು ಕಡೆಗೆ ಕಲೆಕ್ಷನ್ಗಾಗಿ ಶಿಕಾರಿಪುರಕ್ಕೆ ಹೊರಟಿದ್ದರು. 28 ನೇ ತಾರೀಖು ಬೆಳಗಿನ ಜಾವ 4.30 ಗಂಟೆಗೆ ಹೊರಟು ವಿದ್ಯಾನಗರದ ಕಡೆಯಿಂದ ಹೊಳೆ ಬಸ್ಟಾಪ್ ಹತ್ತಿರ ಬರುತ್ತಿರುವಾಗ ಬೈಕಿನಲ್ಲಿ, ಪೆಟ್ರೋಲ್ ಖಾಲಿಯಾಗಿದೆ. ಆದರೆ ಅಲ್ಲಿಯೇ ಇರುವ ಪೆಟ್ರೋಲ್ಬಂಕ್ಇನ್ನೂ ಓಪನ್ಆಗಿರಲಿಲ್ಲ. ಹೀಗಾಗಿ ಬೈಕ್ನಿಲ್ಲಿಸಿ ಪೆಟ್ರೋಲ್ತರಲು ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಯುವಕನೊಬ್ಬ ಎಲ್ಲಿಗೆ ಹೋಗುತ್ತಿದ್ದೀರಾ ಅಂತಾ ಪ್ರಶ್ನಿಸಿದ್ದಾನೆ.
ಯುವಕನ ಪ್ರಶ್ನೆಗೆ ಪೆಟ್ರೋಲ್ತರಲು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಆಗ ಯುವಕ ಸೂಳೆಬೈಲ್ನಲ್ಲಿ ಪೆಟ್ರೋಲ್ಬಂಕ್ತೆಗೆದಿರುತ್ತದೆ. ಬನ್ನಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾನೆ. ಆತನ ಮಾತನ್ನು ನಂಬಿದ ಕಲೆಕ್ಷನ್ಎಕ್ಸಿಕ್ಯೂಟಿವ್, ಅವರ ಬೈಕ್ನಲ್ಲಿ ವಿದ್ಯಾನಗರದ ಕಂಟ್ರಿಕ್ಲಬ್ ಕಡೆಗೆ ಹೋಗುವ ರಸ್ತೆಯಲ್ಲಿ ಸಾಗಿದ್ದಾರೆ.
ಅಷ್ಟೊತ್ತಿಗೆ ಅಲ್ಲಿ ಇನ್ನೂ ಮೂವರು ಅಪರಿಚಿತ ಯುವಕರು ಅಲ್ಲಿಗೆ ಬಂದು ಚಾಕು ತೋರಿಸಿ ಹೆದರಿಸಲು ಆರಂಭಿಸಿದ್ದಾರೆ. ಅಲ್ಲದೆ ಮಾಡಿ ಕಲೆಕ್ಷನ್ಹಣ 20 ಸಾವಿರ ಹಾಗೂ ಮೊಬೈಲ್ಫೋನ್ಕಸಿದುಕೊಂಡು ಅಲ್ಲಿಂದ ಎಸ್ಕೇಪ್ಆಗಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ಠಾಷೆಯಲ್ಲಿ ಕೇಸ್ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.