i
ವೃದ್ಧೆ ಕೊಲೆ ಪ್ರಕರಣ ಪತ್ತೆ ಮಾಡಿದ ಪೊಲೀಸರು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಹುಂಚದ ಮುತ್ತಿನಕೆರೆಯಲ್ಲಿ ಶವ ಪತ್ತೆ ಪ್ರಕರಣವನ್ನು ಬೇಧಿಸಿದ್ದು, ಇದೊಂದು ಕೊಲೆ ಎಂದು ಸಾಬೀತಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಜಿ.ಕೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮತನಾಡಿ, ಕೊಲೆಗೀಡಾದ ಜಯಮ್ಮನಿಂದ 60 ಸಾವಿರ ಹಣ ಸಾಲವನ್ನಉ ಪಡೆದ ಕೊಲೆ ಆರೋಪಿ ಮಯೂರ್ ರಿಪ್ಪನ್ ಪೇಟೆಗೆ ಬಂದರೆ ಹಣಕೊಡುವುದಾಗಿ ಹಾಗೂ ಸೈಟ್ ಕೊಡಿಸುವುದಾಗಿ ಹೇಳಿ ವೃದ್ಧೆಯನ್ನು ಮಾ-18ರಂದು ಕರೆಯಿಸಿಕೊಂಡಿದ್ದನು. ಅಲ್ಲಿ ಮಯೂರ್ ಆಕೆಯನ್ನು ಸ್ನೇಹಿತನ ವ್ಯಾಗನರ್ ನಲ್ಲಿ ಕೂರಿಸಿಕೊಂಡು ಹುಂಚ, ಆಗುಂಬೆ ಕಡೆ ಹೋಗಿದ್ದನು. ಆಗುಂಬೆಯಲ್ಲಿ ಪೊಲೀಸರು ಇದ್ದ ಕಾರಣ ವಾಪಾಸ್ ಆಗಿದ್ದರು.
ಹೊಳಲೂರಿನ ವೃದ್ಧಾಶ್ರಮದಲ್ಲಿ ಕೆಲಸ ಮಾಡಿಕೊಂಡಿದ್ದ ನಿನ್ನನ್ನು ಮಠಕ್ಕೆ ಸೇರಿಸುತ್ತೇನೆ ಎಂದು ಕರೆದುಕೊಂಡು ಹೋಗಿರುತ್ತಾರೆ. ಆಕೆಯ ಮೇಲೆ ಹಲ್ಲೆ ಮಾಡಿ ಕೆರೆಯಲ್ಲಿ ಹಗ್ಗ ಕಟ್ಟಿ ಕೊಲೆ ಮಾಡಲಾಗಿರುತ್ತದೆ. ಮಯೂರ ಮತ್ತೋರ್ವ ಮತ್ತೆ ಆತನ ಅತ್ತೆಯೂ ಆರೋಪಿಯಾಗಿದ್ದಾರೆ, ಆತನ ಅತ್ತೆ ಜಯಮ್ಮಳ ಚಲನ ವಲನವನ್ನು ತಿಳಿಸುವ ಮಾಹಿತಿದಾರರಗಿರುತ್ತಾರೆ ಮತ್ತು ಚಿನ್ನಾಭರಣವನ್ನ ಇಟ್ಟುಕೊಂಡಿರುತ್ತಾಳೆ ಎಂದು ಮಾಹಿತಿ ಕೊಟ್ಟಿರುತ್ತಾಳೆ ಎಂದರು.
ಆರೋಪಿ ಮಯೂರ್ ಕ್ರಿಮಿನಲ್ ಬ್ಯಾಕ್ ರೌಂಡ್ ಇರುತ್ತದೆ. ಟೆಕ್ನಿಕಲ್ ಡಾಟಾ ಮೂಲಕ ಕೊಲೆ ಆರೋಪಿ ಪತ್ತೆ ಮಾಡಲಾಗಿದೆ.
ಹೊಳಲೂರಿನ ವೃದ್ಧೆಯ ಕಾಣೆ ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು ಎಂದರು.
ಮಹಿಳೆ ಬಳಿ ಪತ್ತೆಯಾದಚಿನ್ನಾಭರಣಗಳು ರೋಲ್ಡ ಗೋಲ್ಡ್ ಎಂದು ಆರೋಪಿಗಳು ಕೆರೆಗೆ ಬಿಸಾಕಿ ಹೋಗಿದ್ದಾರೆ. ವೃದ್ಧೆ ಜಯಮ್ಮಳಿಗೆ ಈಜು ಬರುತ್ತದೆ ಎಂದುಆಕೆಯ ಕಾಲಿಗೆ ಹಗ್ಗಕಟ್ಟಲಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿರುವುದಾಗಿ ತಿಳಿಸಿದರು.