i
ಏ.೮ರಂದು ಕ್ಯಾನ್ಸರ್ಗೆ ಪಂಚಗವ್ಯ ಮಾಹಿತಿ
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿವಮೊಗ್ಗ ತಾಲೂಕಿನ ನಿದಿಗೆಯಲ್ಲಿರುವ ಟಿಎಂಎಇಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬೆಂಗಳೂರಿನ ಖ್ಯಾತ ವೈದ್ಯ, ಪಂಚಗವ್ಯ ಚಿಕಿತ್ಸೆಯಲ್ಲಿ ವಿಶೇಷ ತಜ್ಞರಾಗಿರುವ ಡಾ.ಡಿ.ಪಿ. ರಮೇಶ್ ಅವರು ಏಪ್ರಿಲ್ 8ರ ಸೋಮವಾರ ಬೆಳಿಗ್ಗೆ ೧೦ರಿಂದ ಸಂಜೆ ೫ರವರೆಗೆ ಕ್ಯಾನ್ಸರ್ಗೆ ಪಂಚಗವ್ಯದ ಮಾಹಿತಿ ನೀಡಲಿದ್ದಾರೆ.
ಡಾ. ರಮೇಶ್ ಅವರು ಗೋಮೂತ್ರ- ಪಂಚಗವ್ಯದ ಬಳಕೆ- ಚಿಕಿತ್ಸೆ ಬಗ್ಗೆ ತಿಂಗಳಲ್ಲಿ ಸುಮಾರು ೨೦ ದಿನ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಪ್ರವಾಸ ಕೈಗೊಂಡು, ಅಲ್ಲೆಲ್ಲಾ ಉಚಿತ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಆಯುರ್ವೇದ ಪಂಚಗವ್ಯ ಚಿಕಿತ್ಸಾ ವಿಧಾನದ ವೈಶಿಷ್ಟ ಹಾಗೂ ಅದರ ಉಪಯೋಗಗಳ ಬಗ್ಗೆ ಜನರಿಗೆ ತಿಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಬಿಎಎಂಎಸ್ ವೈದ್ಯರಾಗಿರುವ ಡಾ.ಡಿ.ಪಿ. ರಮೇಶ್ ಅವರು ಗೋ ಸೇವಾ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತದ ಪಂಚಗವ್ಯ ಮನುಷ್ಯ ಚಿಕಿತ್ಸೆ ಆಯಾಮ ವಿಷಯ ಪ್ರಮುಖರು. ಶ್ರೀರಾಮಚಂದ್ರಾಪುರ ಮಠದ ಮಾ ಗೋ ಪ್ರಾಡಕ್ಟ್ ಲಿ.ನ ತಾಂತ್ರಿಕ ಸಲಹೆಗಾರರಾಗಿದ್ದು, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜ್ನ ಆಯುರ್ ಪಂಚಗವ್ಯ ಕ್ಯಾನ್ಸರ್ ಕೇರ್ ಸೆಂಟರ್ನ ಪ್ರಧಾನ ಸಲಹಾ ವೈದ್ಯರಾಗಿದ್ದಾರೆ. ಮಧ್ಯಪ್ರದೇಶದ ಡಾ. ಜೈನ್ ಕೌ ಯೂರಿನ್ ಥೆರಪಿ ಹೆಲ್ತ್ ಕ್ಲಿನಿಕ್ ಇಲ್ಲಿನ ವಿಶೇಷ ಸಲಹಾ ವೈದ್ಯರಾಗಿ, ಗದಗದ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸಂಘ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಆಸಕ್ತರು ಹಾಗೂ ಕ್ಯಾನ್ಸರ್ ಪೀಡಿತರು ಪಾಲ್ಗೊಂಡು ಪಂಚಗವ್ಯದ ಮಾಹಿತಿ ಪಡೆಯಬಹುದಾಗಿದೆ ಎಂದು ಟಿಎಂಎಇಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಜಿ.ಎ. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.