i
ಚುಕ್ಕಿಗೆ ಜಂಗಮರಿಂದ ಸನ್ಮಾನ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿವಮೊಗ್ಗ ನಗರದ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ, ವಕೀಲರಾದ ಪೂರ್ಣಿಮಾ ಚಂದ್ರಶೇಖರ್ ಇವರ ಮಗಳಾದ ಕುಮಾರಿ ಚುಕ್ಕಿ ಇವಳನ್ನು ಜಂಗಮಸಮಾಜದಿಂದ ಗೌರವಿಸಲಾಯಿತು.
ಪಿಯುಸಿ ಕಲಾವಿಭಾಗದಲ್ಲಿ ಕರ್ನಾಟಕಕ್ಕೆ ನಾಲ್ಕನೇ ರಾಂಕನ್ನು ಇವಳು ಪಡೆದಿದ್ದಾಳೆ. ಶಿವಮೊಗ್ಗ ಜಿಲ್ಲಾ ಜಂಗಮ ಜಂಗಮ ಸಮಾಜದ ವತಿಯಿಂದ ಸಮಾಜದ ಅಧ್ಯಕ್ಷರಾದ ವೇದಮೂರ್ತಿ ಚಂದ್ರಯ್ಯನವರು, ಪ್ರಧಾನ ಕಾರ್ಯದರ್ಶಿಯಾದ ಪುಟ್ಟಯ್ಯನಗೋಡಿಮಠ ಸಂಘಟನಾ ಕಾರ್ಯದರ್ಶಿಯಾದ ಕಾಟನ್ ಜಗದೀಶ್ ಪದಾಧಿಕಾರಿಗಳಾದ ಚಂದ್ರಶೇಖರಯ್ಯನವರು ಆರ್ಗನಿಕ್ ಮಂಜಣ್ಣ, ಮಹಿಳಾ ಘಟಕದ ಕಾರ್ಯದರ್ಶಿ ಆಶಾ ಸಾಲಿಮಠ್, ಉಪನ್ಯಾಸಕಿ ಪ್ರಶಂಸನಿ ಓಂಕಾರ ಹನಗೋಡಿಮಠ ಹಾಜರಿದ್ದರು.