i
ಹೃದಯಾಘಾತದಿಂದ ಮೃತಪಟ್ಟಿದ್ದ ಚೇತನ್ಗೆ 506 ಅಂಕಗಳು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ವಾರದೊಳಗೆ ಹೃದಯಾಘಾತದಿಂದ ಮೃತಪಟ್ಟಿದ್ದ ಚಿತ್ರದುರ್ಗದ ಸಿಎನ್ಸಿ ಪಿಯು ಕಾಲೇಜಿನ ವಿದ್ಯಾರ್ಥಿ ಓ.ಚೇತನ್ಗೆ 506 ಅಂಕಗಳು ಲಭಿಸಿದೆ. ನಗರದ ಕೋಣನಹಟ್ಟಿ ನಿವಾಸಿಗಳಾದ ಓಬಳೇಶ್ ಮತ್ತು ಮಂಜುಳಾ ದಂಪತಿ ಪುತ್ರ ಓ.ಚೇತನ್ ನಗರದ ಸಿಎನ್ಸಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಆರು ದಿನಗಳ ನಂತರ ಹೃದಯಾಘಾತದಿಂದ ಮೃತಪಟ್ಟಿದ್ದ. ಎಸ್ಎಸ್ಎಲ್ಸಿಯಲ್ಲಿ ಶೇಕಡ ೯೦ ರಷ್ಟು ಅಂಕಗಳಿಸಿದ್ದ ಚೇತನ್ ದ್ವಿತೀಯ ಪಿಯುಸಿಯಲ್ಲಿ ಶೇ.೮೪.೩೩ ರಷ್ಟು ಅಂಕಗಳಿಸಿದ್ದಾನೆ. ಕನ್ನಡದಲ್ಲಿ ೮೪, ಇಂಗ್ಲಿಷ್ ೮೧, ಭೌತಶಾಸ್ತ್ರ ೮೭, ರಸಾಯನಶಾಸ್ತ್ರ ೭೭, ಗಣಿತ ೯೦, ಜೀವಶಾಸ್ತ್ರದಲ್ಲಿ ೮೭ ಅಂಕಗಳನ್ನು ಪಡೆದಿದ್ದಾನೆ. ಪರೀಕ್ಷೆ ಮುಗಿದ ಮರು ದಿನದಿಂದಲೇ ನೀಟ್ಗೆ ತಯಾರಿಗಾಗಿ ತರಬೇತಿ ಪಡೆಯುತ್ತಿದ್ದ.