i
ಧಾರ್ಮಿಕ ಕಾರ್ಯಗಳಿಂದ ಕುಟುಂಬಗಳಲ್ಲಿ ಸಾಮರಸ್ಯ ಸಾಧ್ಯ:ಶ್ರೀಗಳು…
ಚಂದ್ರವಳ್ಳಿ ನ್ಯೂಸ್, ಭದ್ರಾವತಿ:
ಎಲ್ಲೆಡೆ ದೇವರ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಧಾರ್ಮಿಕ ಕಾರ್ಯಗಳಿಂದ ಕುಟುಂಬಗಳಲ್ಲಿ ಸುಖ ಶಾಂತಿ ನೆಮ್ಮದಿ ಸಾಮರಸ್ಯ ಬದುಕುಂಟಾಗುತ್ತದೆ ಎಂದು ಬಿಳಿಕಿ ಹಿರೇಮಠದ ಶ್ರೀರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ನಗರದ ಜೇಡಿಕಟ್ಟೆ-ಜೇಡಿಕಟ್ಟೆ ಹೊಸೂರಿನಲ್ಲಿ ಶ್ರೀಮರುಳ ಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶ್ರೀ ಚೌಡೇಶ್ವರಿ ದೇವಾಲಯ ಉದ್ಘಾಟನೆ, ದೇವಿಯ ಪ್ರಾಣ ಪ್ರತಿಷ್ಠಾಪನೆ, ಗಣ ಹೋಮ, ವಾಸ್ತು ಹೋಮ ನೆರವೇರಿಸಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಜನ ಕಲ್ಯಾಣ ಟ್ರಸ್ಟ್ನಿಂದ ಹಲವಾರು ವರ್ಷಗಳಿಂದ ನಿರಂತರವಾಗಿ ಧಾರ್ಮಿಕ ಕಲ್ಯಾಣಗಳನ್ನು ನಡೆಸಿದೆ. ಇಂತಹ ಕಾರ್ಯಗಳಿಂದಲೇ ಮಳೆ ಬೆಳೆ ಸಮೃದ್ದಿ ಲಭ್ಯವಾಗುತ್ತದೆ ಎಂದರು.
ದೇವಾಲಯದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ವಾಗೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿ ದೇವಾಲಯಗಳ ಜೀರ್ಣೋದ್ದಾರ ಅಭಿವೃದ್ದಿಗೆ ಶ್ರಮಿಸುತ್ತಿರುವ ಹಾದಿಯನ್ನು ಪ್ರಚುರ ಪಡಿಸಿ ದಾನಿಗಳನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಗೋಣಿಬೀಡಿನ ಶಿವರಾಜ್ ಸಂಗಡಿಗರ ವೀರಗಾಸೆ ಮೈನವಿರೇಳಿಸಿತು. ಗ್ರಾಮದ ಯುವಕರಿಂದ ಡೊಳ್ಳು ಕುಣಿತ, ಮಂಗಳವಾಧ್ಯ, ಸುತ್ತಮುತ್ತಲಿನ ಹಲವು ದೇವರುಗಳ ಉತ್ಸವ ವಿಜೃಂಭಣೆಯಿಂದ ನಡೆಯಿತು. ನೂರಾರು ಮಹಿಳೆಯರು ಪೂರ್ಣ ಕುಂಭ ಮೇಳದೊಂದಿಗೆ ಆಗಮಿಸಿ ಆಕರ್ಷಿತರಾಗಿದ್ದರು.
ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಮುಖಂಡರಾದ ಶಿವಣ್ಣ, ಜುಂಜಯ್ಯ, ಬಾಬುರಾವ್, ಎಂ.ಶಿವಕುಮಾರ್, ಪ್ರಕಾಶ್, ಮೇಘರಾಜ್, ದೇವರಾಜ್, ರಾಮಲಿಂಗಂ, ನಾಗರತ್ನಮ್ಮ ಸಿದ್ದಲಿಂಗಯ್ಯ, ಶಾರದಾಬಾಯಿ, ಮೀನಾಕ್ಷಿ, ರತ್ನಮ್ಮ, ಮುಂತಾದವರಿದ್ದರು.