i
ಸಿಡಿಲಿಗೆ ಎರಡು ದನಗಳು ಸಾವು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಸಿಡಿಲು ಬಡಿದು ಎರಡು ದನಗಳು ಸಾವನ್ನಪ್ಪಿವೆ. ಶಿವಮೊಗ್ಗ ತಾಲೂಕು ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತಾಪುರದಲ್ಲಿ ಘಟನೆ ಸಂಭವಿಸಿದೆ. ನಾಗೇಶ್ಎಂಬುವವರು ತಮ್ಮ ಮನೆ ಪಕ್ಕದ ಹುಣಸೆ ಮರದ ಕೆಳಗೆ ದನಗಳನ್ನು ಕಟ್ಟಿದ್ದರು. ಸಂಜೆ ಸಿಡಿಲು ಬಡಿದು ದನಗಳು ಸಾವನ್ನಪ್ಪಿವೆ. ವಿಚಾರ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿದ್ದರು. ಶುಕ್ರವಾರ ಆಯನೂರು ಕೋಟೆಯಲ್ಲಿ ಸಿಡಿಲು ಬಿಡಿದು 18 ಕುರಿಗಳು ಸಾವನ್ನಪ್ಪಿದ್ದವು.