i
ಮಳೆಯ ಆರ್ಭಟ: ಮರ ಬಿದ್ದು ಸಂಚಾರ ಬಂದ್…
ಚಂದ್ರವಳ್ಳಿ ನ್ಯೂಸ್, ಸಾಗರ:
ಆನಂದಪುರ ಸುತ್ತಮುತ್ತ ಮಳೆಯ ಆರ್ಭಟ ಹೆಚ್ಚಿದೆ. ಗಾಳಿ ಸಮೇತ ಸಿಡಿಲು ಹಾಗೂ ಬಿರುಸಿನ ಮಳೆಗೆ ಜನ ಅಕ್ಷರಶ: ನಲುಗಿದ್ದಾರೆ.
ಆನಂದಪುರ ಸಮೀಪದ ಮುಂಬಾಳು ಗ್ರಾಮದಲ್ಲಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಸುಮಾರು ಒಂದು ಗಂಟೆಗೂ ಅಧಿಕ ಕಾಲದಿಂದ ವಾಹನ ಸವಾರರು ಮುಂದಕ್ಕೆ ಹೋಗಲಾರದೆ ಹಿಂದಕ್ಕೆ ವಾಪಸ್ ಮಾಡಲಾಗದೆ ಪರದಾಡುವ ದೃಶ್ಯ
ಕಂಡುಬಂತು. ಬಸ್ ಗಳು ಸಹ ಒಂದು ಗಂಟೆಯಿಂದ ನಿಂತಲ್ಲೇ ನಿಂತಿದ್ದು ಸಾರ್ವಜನಿಕರು ಹಾಗೂ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.